Webdunia - Bharat's app for daily news and videos

Install App

ಯೋಧನ ಹೆಸರಲ್ಲಿ ಮೋಸಕ್ಕೆ ಇಳಿದ ಆನ್ ಲೈನ್ ವಂಚಕರು..!

Webdunia
ಶನಿವಾರ, 3 ಡಿಸೆಂಬರ್ 2022 (12:30 IST)
ಯೋಧರ ಹೆಸರು ಬಳಸಿಕೊಂಡು ಆನ್‌ಲೈನ್ ವಂಚಕರು ಮತ್ತೆ ತಮ್ಮ ಪ್ರವೃತ್ತಿ ಮುಂದುವರೆಸಿದ್ದಾರೆ. ಸದ್ಯ  ದೀಪಕ್ ಪವಾರ್ ಎಂಬ ಯೋಧನ ಹೆಸರಿನಲ್ಲಿ ವಂಚಿಸಲು ಸೈಬರ್ ಚೋರರು ಮುಂದಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.
ನೋ ಬ್ರೋಕರ್ ಆ್ಯಪ್ನಲ್ಲಿ ಮಹೇಶ್ ರಾಜಗೋಪಾಲ್ ಎಂಬುವವರು 2 ಬಿ ಹೆಚ್ ಕ ಮನೆ ಖಾಲಿ ಇದೆ ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ದೀಪಕ್ ಪವಾರ್ ಎಂಬ ಯೋಧನ ಹೆಸರಲ್ಲಿ ಮಹೇಶ್ಗೆ ಸೈಬರ್ ಖದೀಮರು ಮೇಸೆಜ್ ಮಾಡಿ ನಮಗೆ ಬಾಡಿಗೆಗೆ ಮನೆ ಬೇಕು ಎಂದು ಕೇಳಿದ್ದಾರೆ. ಹೀಗೆ ಮಹೇಶ್ ಹಾಗೂ ಸೈಬರ್ ವಂಚಕರ ನಡುವೆ ಮೆಸೇಜ್ ಮೂಲಕವೇ ಸಂವಹನ ನಡೆದಿದೆ. ಅತ್ತ ಸೈಬರ್ ವಂಚಕ ತಾನು ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ ಫೋಟೋ , ಆರ್ಮಿಯ ಐಡಿ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಕಳುಹಿಸಿದ್ದಾನೆ. ನಂತರ ಮನೆ ಬಾಡಿಗೆಗೆ ಬರಲು ಅಡ್ವಾನ್ಸ್ ಕೊಡುವುದಾಗಿ ಹೇಳಿ ಗೂಗಲ್ ಪೇ ಮೂಲಕ ಒಂದು ರೂಪಾಯಿ ಹಣ ಕಳುಹಿಸುವಂತೆ ಮಹೇಶ್ ಗೆ  ಹೇಳಿದ್ದ. ಇದಕ್ಕೆ ಒಪ್ಪದ ಮನೆ ಮಾಲೀಕ ಮಹೇಶ್, ನೇರವಾಗಿ ಬಂದು ಭೇಟಿಯಾಗಲು ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಸೈಬರ್ ವಂಚಕ ನೀವು ಒಂದು ರೂಪಾಯಿ ಗೂಗಲ್ ಪೇ ಮಾಡಿ ಎಂದು ಹತ್ತಾರು ಬಾರಿ ಸತಾಯಿಸಲು ಶುರು ಮಾಡಿದ್ದಾನೆ. 
 
ಇದರಿಂದ ಅನುಮಾನಗೊಂಡ ಮನೆ ಮಾಲೀಕ ಮಹೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಗೂಗಲ್ ಪೇ ಬಳಿಕ ಕ್ಯೂ ಆರ್ ಕೋಡ್ ಕೇಳಿ ಹಣ ಲಪಟಾಯಿಸಲು ಸೈಬರ್ ಖದೀಮರು ಪ್ಲ್ಯಾನ್ ಮಾಡಿದ್ದರು ಎಂಬುದು ಗೊತ್ತಾಗಿದೆ. ಈ ಹಿಂದಿನಿಂದಲೂ ಸಹ ಯೋಧನ ಹೆಸರಿನಲ್ಲಿ ಹಣ ಕೇಳುವ ದಂಧೆ ನಗರದಲ್ಲಿ ಹೆಚ್ಚಾಗುತ್ತಿದೆ. ಅನೇಕ ಮಂದಿ ಸೈಬರ್ ಖದೀಮರ‌ ಬಗ್ಗೆ ಅರಿಯದೇ ಯೋಧ ಎಂದು ನಂಬಿ ಲಕ್ಷಾಂತರ ಹಣ ಕಳೆದುಕೊಂಡಿದ್ದರು. ಈ ಹಿನ್ನೆಲೆ ಅಪರಿಚಿತರ ಜೊತೆ ವ್ಯವಹಾರ ಮಾಡುವಾಗ ಜಾಗ್ರತೆ ವಹಿಸಿ ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ‌ ಮಾಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rajastan: ನಿದ್ರಾಜನಕ ಔಷಧಿ ನೀಡಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೇಲೆ ರೇಪ್‌

ಕರ್ನಾಟಕದ ಮರ್ಯಾದೆ ಹಾಳು ಮಾಡಿದ್ದೀರಿ: ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಸೋಮಣ್ಣ ವಾಗ್ದಾಳಿ

ಹನಿಮೂನ್​ಗೆ ಹೋದ ನವಜೋಡಿ ನಾಪತ್ತೆ: ಕಮರಿನಲ್ಲಿ ಗಂಡನ ಶವ ಪತ್ತೆ, ಪತ್ನಿಗಾಗಿ ಮುಂದುವರಿದ ಹುಡುಕಾಟ

ಅರಾಂಬೈ ಬಂಧನ ಬೆನ್ನಲ್ಲೆ ಮಣಿಪುರದಲ್ಲಿ ಹಿಂಸಾಚಾರ: ಹಲವೆಡೆ ಕರ್ಫ್ಯೂ ಜಾರಿ, ಇಂಟರ್ನೆಟ್ ಸ್ಥಗಿತ

Karnataka weather: ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಮುಂದಿನ ಸುದ್ದಿ
Show comments