Select Your Language

Notifications

webdunia
webdunia
webdunia
webdunia

ಮತ್ತೊಬ್ಬ ಶಾಸಕನಿಂದ ಅಧಿಕಾರಿಗೆ ಧಮ್ಕಿ: ಇದೇನು ಗುಂಡಾರಾಜ್ಯವೇ?

ಮತ್ತೊಬ್ಬ ಶಾಸಕನಿಂದ ಅಧಿಕಾರಿಗೆ ಧಮ್ಕಿ: ಇದೇನು ಗುಂಡಾರಾಜ್ಯವೇ?
ಬೆಳಗಾವಿ , ಮಂಗಳವಾರ, 10 ಜನವರಿ 2017 (16:32 IST)
ವೈದ್ಯರ ಮೇಲೆ ಸಂಸದ ಅನಂತ್ ಕುಮಾರ್ ಹೆಗಡೆ ನಡೆಸಿದ ಹಲ್ಲೆ ಪ್ರಕರಣ ಹಾಗೂ ಶಾಸಕ ರಾಜು ಕಾಗೆ ಪುತ್ರಿಯ ಗೂಂಡಾಗಿರಿ ಪ್ರಕರಣದ ಬೆನ್ನಲ್ಲೇ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಪಿ.ರಾಜೀವ್ ಅಧಿಕಾರಿಗಳಿಗೆ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಕರ್ನಾಟಕ ಗೂಂಡಾರಾಜ್ಯ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಬೆಳಗಾವಿ ಜಿಲ್ಲೆಯ ಕುಡುಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಅವರು ಸರಕಾರಿ ಜಾಗದ ಸರ್ವೆ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿಯ ಅಧಿಕಾರಿಯೊಬ್ಬರಿಗೆ ಧಮ್ಕಿ ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 
 
ನಿನಗೆ ಗಂಡಸುತನ ಇದ್ದರೆ ಇಲ್ಲಿ ನನ್ನ ಕೇತ್ರದಲ್ಲಿ ಕೆಲಸ ಮಾಡು ಇಲ್ಲದಿದ್ದರೆ ಮನೆಗೆ ಹೋಗು ಎಂದು ಶಾಸಕ ಅಧಿಕಾರಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. 
 
ಇತ್ತೀಚೆಗೆ ವೈದ್ಯರ ಮೇಲೆ ಹಲ್ಲೆ ಮಾಡುವ ಮೂಲಕ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಗೂಂಡಾವರ್ತನೆ ತೋರಿದ್ದರು. ಮತ್ತೊಂದೆಡೆ ಬಿಜೆಪಿ ಶಾಸಕ ರಾಜು ಕಾಗೆ ಬೆಂಬಲಿಗರು ಕಾಂಗ್ರೆಸ್ ನಾಯಕನ ಮೇಲೆ ಅಟ್ಟಹಾಸ ಮೆರೆದಿದ್ದರ ಬೆನ್ನಲ್ಲೇ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಪಿ.ರಾಜೀವ್ ಅಧಿಕಾರಿಗಳಿಗೆ ಧಮ್ಕಿ ಹಾಕುವ ಮೂಲಕ ಗೂಂಡಾರಾಜಕ್ಕೆ ಪುಷ್ಟಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಮಲ ಪಾಳಯದಲ್ಲಿ ಬ್ರಿಗೇಡ್ ತಳಮಳ...ಪಕ್ಷದಿಂದ ಈಶ್ವರಪ್ಪ ಬೆಂಬಲಿಗ ಅಮಾನತು