Publish Date: Thu, 11 Jun 2026 (11:22 IST)
Updated Date: Thu, 11 Jun 2026 (11:24 IST)
ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಿ ಮುಂದುವರಿಯುವ ಬಗ್ಗೆ ಮತ್ತೆ ನೊಣವಿನಕೆರೆ ಅಜ್ಜಯ್ಯ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಡಿಕೆ ಶಿವಕುಮಾರ್ ಗೆ ನೊಣವಿನಕೆರೆ ಅಜ್ಜಯ್ಯನ ಬಗ್ಗೆ ಭಾರೀ ಭಕ್ತಿ ಮತ್ತು ನಂಬಿಕೆಯಿದೆ. ಸಿಎಂ ಆಗುವ ಮೊದಲು ಮತ್ತು ನಂತರ ಅಜ್ಜಯ್ಯನ ಸಲಹೆ ಪಡೆದಿದ್ದಲ್ಲದೆ, ಪ್ರಮಾಣ ವಚನದ ನಂತರವೂ ಅವರನ್ನು ವಿಧಾನಸೌದದ ಸಿಎಂ ಕಚೇರಿಗೆ ಕರೆಸಿ ಪೂಜೆ ಮಾಡಿಸಿದ್ದರು.
ಇದೀಗ ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ ಬಗ್ಗೆ ನೊಣವಿನಕೆರೆ ಅಜ್ಜಯ್ಯ ಭವಿಷ್ಯ ನುಡಿದಿದ್ದಾರೆ. ಡಿಕೆ ಶಿವಕುಮಾರ್ ಗೆ ಸದ್ಯಕ್ಕೆ ಯಾವುದೇ ಕಂಟಕವಿಲ್ಲ. ಅವರಿಗೆ ಗುರುವಿನ ಆಶೀರ್ವಾದವಿದೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಯಾವುದೇ ತೊಂದರೆ ಬಂದರೂ ಗುರುಗಳ ಆಶೀರ್ವಾದದಿಂದ ನಿವಾರಣೆಯಾಗುತ್ತದೆ ಎಂದಿದ್ದಾರೆ.
ಸದ್ಯಕ್ಕೆ ಕರ್ನಾಟಕದಲ್ಲಿ ಸಚಿವ ಸ್ಥಾನಕ್ಕಾಗಿ ಹಗ್ಗ ಜಗ್ಗಾಟಗಳು ನಡೆಯುತ್ತಿವೆ. ಆದರೆ ಇದು ಯಾವುದೂ ಡಿಕೆ ಶಿವಕುಮಾರ್ ಸ್ಥಾನಕ್ಕೆ ಬಾಧಕವಾಗದು ಎಂದು ಸ್ವಾಮೀಜಿಗಳು ಸೂಚ್ಯವಾಗಿ ತಿಳಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ