Select Your Language

Notifications

webdunia
webdunia
webdunia
webdunia

ನಾಮಪತ್ರ ಪರಿಶೀಲನಾ ಕಾರ್ಯ

ನಾಮಪತ್ರ ಪರಿಶೀಲನಾ ಕಾರ್ಯ
ಕನಕಪುರ , ಶುಕ್ರವಾರ, 21 ಏಪ್ರಿಲ್ 2023 (16:00 IST)
ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿಅಭ್ಯರ್ಥಿಗಳ ನಾಮಪತ್ರ ಪರಿಶೀಲನಾ ಕಾರ್ಯ ನಡೆದಿದೆ. ಚುನಾವಣಾಧಿಕಾರಿ ಸಂತೋಷ್ ಹಾಗೂ ಚುನಾವಣಾ ವೀಕ್ಷಕ ಜಿ.ಎಸ್ ಪಾಂಡ ದಾಸ್ ನೇತೃತ್ವದಲ್ಲಿ ನಾಮಪತ್ರ ಪರಿಶೀಲನಾ ಕಾರ್ಯ ನಡೆದಿದೆ. ಕನಕಪುರ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​​ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಡಿಕೆಶಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ. ಈ ಮೂಲಕ ಡಿಕೆಶಿಗೆ ಬಿಗ್​ ರಿಲೀಫ್​ ಸಿಕ್ಕಿದಂತಾಗಿದೆ. ಇನ್ನೊಂದೆಡೆ ಸಂಸದ ಡಿ.ಕೆ ಸುರೇಶ್​ ನಾಮಪತ್ರವನ್ನು ಸಲ್ಲಿಸಿದ್ರು. ಇದೀಗ ಡಿಕೆ ಶಿವಕುಮಾರ್​ ನಾಮಪತ್ರ ಅಂಗೀಕಾರವಾಗಿದ್ದರಿಂದ, ಸಹೋದರ ಡಿ.ಕೆ ಸುರೇಶ್​ ನಾಮಪತ್ರವನ್ನು ವಾಪಸ್​ ಪಡೆಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್​ನೇ ಬಿಡಲಿಲ್ಲ, ಇನ್ನು ನನ್ನ ಬಿಡ್ತಾರಾ?