Select Your Language

Notifications

webdunia
webdunia
webdunia
webdunia

ಹೋಟೆಲ್, ರೆಸ್ಟೋರೆಂಟ್`ಗಳಲ್ಲಿ ಸೇವಾ ಶುಲ್ಕ ರದ್ದು ಜಾರಿ: ಯು.ಟಿ. ಖಾದರ್

ಹೋಟೆಲ್, ರೆಸ್ಟೋರೆಂಟ್`ಗಳಲ್ಲಿ ಸೇವಾ ಶುಲ್ಕ ರದ್ದು ಜಾರಿ: ಯು.ಟಿ. ಖಾದರ್
ಬೆಂಗಳೂರು , ಮಂಗಳವಾರ, 25 ಏಪ್ರಿಲ್ 2017 (19:33 IST)
ಹೋಟೆಲ್`ಗಳಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ. ಅದು ಗ್ರಾಹಕರ ಸ್ವಯಂ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂಬ ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಈ ನಿಯಮ ಜಾರಿಗೊಳಿಸುವುದಾಗಿ ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ಆದೇಶದ ಪ್ರತಿ ನಮ್ಮ ಕೈಸೇರಿದ್ದು, ಮುಂದಿನ ವಾರ ಹೋಟೆಲ್ ಮಾಲೀಕರು, ರೆಸ್ಟೋರೆಂಟ್ ಮಾಲೀಕರ ಸಭೆ ಕರೆದು ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಆದೇಶದ ಹೊರತಾಗಿಯೂ ರೆಸ್ಟೋರೆಂಟ್`ಗಳು ಸೇವಾ ಶುಲ್ಕ ವಿಧಿಸಿದರೆ ಕಾನೂ ಕ್ರಮ ಕೈಗೊಳ್ಲಲಾಗುವುದು, ಗ್ರಾಹಕ ನ್ಯಾಯಾಲಯಕ್ಕೆ ಹೋಗಬಹುದು ಎಂದಿದ್ದಾರೆ.

ಇದೇವೇಳೆ, ಮದುವೆ ಸೇರಿದಂತೆ ಸಭೆ ಸಮಾರಂಭಗಳಲ್ಲಿ ಆಹಾರ ವ್ಯರ್ಥ ಮಾಡುವುದನ್ನ ತಡೆಯಲು ಮತ್ತು ಅವರ ವಿರುದ್ಧ ಕ್ರಮ ಜರುಗಿಸಲು ಹೊಸ ಕಾಯ್ದೆ ಜಾರಿಗೆ ಚಿಂತನೆ ನಡೆದಿದೆ ಎಂದು ಯು.ಟಿ. ಖಾದರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಸಮಾರಂಭಗಳಲ್ಲಿ ಮಾಂಸದೂಟ ನಿಷೇಧಿಸಲು ಪೇಟಾ ಮನವಿ