Publish Date: Sat, 19 Aug 2023 (15:00 IST)
Updated Date: Sat, 19 Aug 2023 (14:49 IST)
ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಯಿ ವಾಗ್ದಾಳಿ ನಡೆಸಿದ್ದಾರೆ.ಇವತ್ತು ಈ ಸರ್ಕಾರ ತನ್ನ ಲೋಪ ಮುಚ್ಚಿಕೊಳ್ಳಲು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.ಮಾಧ್ಯಮಗಳ ವಿರುದ್ಧವೂ ಕ್ರಮಕ್ಕೆ ಮುಂದಾಗಿದ್ದಾರೆ.ಯಾರು ಸಹಿ ಹಾಕಿದ್ದಾರೆ ಶಾಸಕರು ಅವರನ್ನು ವಿಚಾರಣೆ ಮಾಡಿಅದು ಬಿಟ್ಟು ಮಾಧ್ಯಮಗಳಿಗೆ ನೋಟಿಸ್ ಕೊಡುತ್ತಿದ್ದೀರಾ.ಕಾಂಟ್ರ್ಯಾಕ್ಟರ್ಗಳು ದೂರು ನೀಡಿದರೆ ಅವರನ್ನೂ ವಿಚಾರಣೆ ಮಾಡುತ್ತಿದ್ದೀರ,ತನಿಖೆ ನೆಪದಲ್ಲಿ ವಿಚಾರಣೆ ಮಾಡುತ್ತಿದ್ದಾರೆ.ನಿಮ್ಮ ವಿರುದ್ಧ ದನಿ ಎತ್ತಿದವರ ದನಿ ಅಡಗಿಸಲು ಪ್ರಯತ್ನ ಮಾಡುತ್ತಿದ್ದೀರ ಇದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಿಎಂ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.