Publish Date: Tue, 03 Oct 2023 (13:05 IST)
Updated Date: Tue, 03 Oct 2023 (13:26 IST)
ಕುಮಾರಸ್ವಾಮಿ ಜ್ಯೋತಿಷ್ಯಾ ಹೇಳೊಕೆ ಶುರುಮಾಡಿದ್ದಾರೆ ಎಂಬ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಎಮ್ ಎಲ್ ಸಿ ಶರವಣ ಪ್ರತಿಕ್ರಿಯಿಸಿದ್ದಾರೆ.ಜ್ಯೋತಿಷ್ಯ ಹೇಳುವಂತಹ ಅವಶ್ಯಕತೆ ನಮ್ಮ ಪಕ್ಷದಲ್ಲಿ ಯಾರಿಗು ಇಲ್ಲ.ಪಾರ್ಲಿಮೆಂಟ್ ಚುನಾವಣೆಯ ಒಳಗೆ ಮೂರು ಡಿಸಿಎಂ ಮಾಡೋದು ಸೂಕ್ತಾ ಅಂತ ಸಚಿವ ರಾಜಣ್ಣ ಹೇಳಿದ್ದಾರೆ.ಸರ್ಕಾರ ಏನು ಆಗುತ್ತೊ ಅಂತಾ ಅವರೇ ವ್ಯಂಗ್ಯವಾಗಿ ಹೇಳಿದ್ದಾರೆ.ನಿಮ್ಮವರೆ ಸಚಿವರು ಹೇಳಿಕೆ ಕೊಟ್ಟಿದ್ದಾರೆ.ನಾವೆಲ್ಲು ಕೂಡ ಸರ್ಕಾರ ಬಿದ್ದು ಹೋಗುತ್ತೆ ಅಂತಾ ಹೇಳಿಲ್ಲ.ನಿಮ್ಮ ನಿಮ್ಮ ಶಾಸಕರನ್ನ ಹಿಡಿದುಕೊಳ್ಳಲು ಇಂತಹ ಹೇಳಿಕೆಗಳನ್ನ ಕೊಡ್ತಿರಾ?ಜನರೆ ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಾರೆ ಎಂದು ಶರವಣ ಹೇಳಿದ್ದಾರೆ.