Webdunia - Bharat's app for daily news and videos

Install App

ಕರ್ನಾಟಕ ಬಿಜೆಪಿಯ ಈ ಘಟಾನುಘಟಿಗಳಿಗೆ ಈ ಬಾರಿ ಟಿಕೆಟ್ ಇಲ್ಲ

Krishnaveni K
ಮಂಗಳವಾರ, 12 ಮಾರ್ಚ್ 2024 (15:29 IST)
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಕರ್ನಾಟಕದ 22 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದೆ ಎನ್ನಲಾಗುತ್ತಿದೆ. ಆದರೆ ಈ ಲಿಸ್ಟ್ ನಲ್ಲಿ ಕೆಲವು ಘಟಾನುಘಟಿಗಳಿಗೇ ಕೊಕ್ ಕೊಡಲಾಗಿದೆ. ಅವರು ಯಾರೆಂದು ನೋಡೋಣ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 400 ಪ್ಲಸ್ ಸ್ಥಾನ ಗೆಲ್ಲಬೇಕೆಂದು ಶತ ಪ್ರಯತ್ನ ಮಾಡುತ್ತಿರುವ ಬಿಜೆಪಿ ಕೆಲವು ಹಳಬರಿಗೆ ಕೊಕ್ ನೀಡಿ, ಹೊಸ ಮುಖ, ಜನಪ್ರಿಯ ಮುಖಗಳಿಗೆ ಮಣೆ ಹಾಕಲು ಹೊರಟಿದೆ. ಅದರಂತೆ ಮೈಸೂರಿನಿಂದ ರಾಜವಂಶಸ್ಥ ಯದುವೀರ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಅದರ್ಥ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ನೀಡಲ್ಲ ಎಂದಾಗಿದೆ.

ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಗೂ ಈ ಬಾರಿ ಟಿಕೆಟ್ ಸಿಗುವುದು ಡೌಟ್. ಕಳೆದ ಮೂರು ಬಾರಿ ಸತತವಾಗಿ ದ.ಕ. ಜಿಲ್ಲೆಯಿಂದ ಗೆದ್ದು ಬಂದ ನಳಿನ್ ಗೆ ಈಗ ಸ್ವಕ್ಷೇತ್ರದಲ್ಲೇ ಕಾರ್ಯಕರ್ಯತರ ಬೆಂಬಲವಿಲ್ಲ. ಹೀಗಾಗಿ ಅವರ ಬದಲಾವಣೆಯಾಗುವುದು ಬಹುತೇಕ ಖಚಿತ.

ಬೆಂಗಳೂರು ಉತ್ತರ ಕ್ಷೇತ್ರದಿಂದ ಕಳೆದ ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಡಿವಿ ಸದಾನಂದ ಗೌಡಗೂ ಮತ್ತೆ ಅವಕಾಶ ಕೊಡಲು ಹೈಕಮಾಂಡ್ ಗೆ ಮನಸ್ಸಿಲ್ಲ. ಅದಕ್ಕೆ ಅವರ ಈ ಬಾರಿಯ ಕಾರ್ಯವೈಖರಿ ಮತ್ತು ಇತ್ತೀಚೆಗೆ ಪಕ್ಷದ ವಿರುದ್ಧವೇ ಪರೋಕ್ಷ ಅಸಮಾಧಾನ ಹೊರಹಾಕಿದ್ದೂ ಕಾರಣ ಎನ್ನಬಹುದು.

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆಗೂ ಈ ಬಾರಿ ಟಿಕೆಟ್ ‍ನೀಡಬಾರದು ಎಂದು ಬಿಜೆಪಿ ನಾಯಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಕೆಲಸ ಮಾಡದೇ ಈಗ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಕ್ಷಕ್ಕೇ ಮುಜುಗರ ತರಿಸುತ್ತಿರುವ ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯ ಕೇಳಿಬಂದಿದೆ.

ಇನ್ನು, ಉಡುಪಿ-ಚಿಕ್ಕಮಗಳೂರು ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೂ ಟಿಕೆಟ್ ನೀಡಲು ಬಿಎಲ್ ಸಂತೋಷ್ ಬಣದ ವಿರೋಧವಿದೆ. ಅಲ್ಲಿನ ಕಾರ್ಯಕರ್ತರೇ ಶೋಭಾ ವಿರುದ್ಧ ಗೋ ಬ್ಯಾಕ್ ಅಭಿಯಾನ ನಡೆಸಿದ್ದರು. ಆದರೆ ಶೋಭಾಗೆ ಬಿಎಸ್ ಯಡಿಯೂರಪ್ಪ ಅಭಯವಿದೆ ಎನ್ನುವುದೇ ಪ್ಲಸ್ ಪಾಯಿಂಟ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

RCB: ಆರ್ ಸಿಬಿ ಆಟಗಾರರಿಗೆ ಸನ್ಮಾನಕ್ಕಿಂತ ಅಧಿಕಾರಿಗಳು, ಸಚಿವರ ಮಕ್ಕಳಿಗೆ ಸೆಲ್ಫೀ ತೆಗೆಯುವುದೇ ಹೆಚ್ಚಾಯ್ತು

ಕುಂಬಮೇಳದಲ್ಲೂ ಕಾಲ್ತುಳಿತ ಆಗಿಲ್ವಾ ಎಂದ ಸಿದ್ದರಾಮಯ್ಯ: ಆಗ ನೀವು ಟೀಕಿಸಿಲ್ವಾ ಎಂದ ಪಬ್ಲಿಕ್

Chinnaswamy stampede: ಪೊಲೀಸರು ಸೆಲೆಬ್ರೇಷನ್ ಬೇಡ ಎಂದಿದ್ರೂ ಹಠ ಹಿಡಿದವರು ಇವರೇ

Chinnaswamy stampede: ಅಣ್ಣಾವ್ರು ತೀರಿಕೊಂಡಾಗಲೂ ಹೀಗೇ ಆಗಿತ್ತು

Karnataka Weather: ಮಳೆಯಿಂದ ಸಾಕು ಸಾಕಾಗಿದ್ದರೆ ಈ ಅಪ್ ಡೇಟ್ ಗಮನಿಸಿ

ಮುಂದಿನ ಸುದ್ದಿ
Show comments