Webdunia - Bharat's app for daily news and videos

Install App

ಇಂಟರ್ನೆಟ್ ಸಂಪರ್ಕ ಬೇಡ ಎಂದಿದ್ದಕ್ಕೆ ಬಿಯರ್ ಬಾಟಲ್ ನಿಂದ ಹೊಡೆಯೋದಾ

Webdunia
ಶನಿವಾರ, 4 ಏಪ್ರಿಲ್ 2020 (14:30 IST)
ವಿಶ್ವದಾದ್ಯಂತ ಕೊರೋನಾ ಭೀತಿಯಲ್ಲಿ ಜನರು ತತ್ತರಿಸಿ ಹೋಗಿದ್ರೆ, ಇಲ್ಲೋರ್ವ ಇಂಟರ್ನೆಟ್ ಪ್ರೋವೈಡರ್ ಮಾಲೀಕನಿಗೆ ಪಿಜಿ ಯವರು  ಇಂಟರ್ನೆಟ್ ಸಂಪರ್ಕ ತೆಗೆದುಕೊಳ್ಳಲು ನಿರಾಕರಣೆ ಮಾಡಿದ್ದಾರೆನ್ನುವ ಚಿಂತೆಯಾಗಿದೆ.

ಇಂಟರ್ನೆಟ್ ಪ್ರೋವೈಡರ್ ಅಂಡ್ ಗ್ಯಾಂಗ್ ನವರು ಪಿಜಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿರುವಂತಹ ಘಟನೆ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಬಳಿಯ ಗೋವಿಂದ ಶೆಟ್ಟಿ ಪಾಳ್ಯದಲ್ಲಿರಯವ ಕ್ವೀನ್ಸ್ ಲಾಂಜ್ ಪಿಜಿ ಬಳಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಪಿಜಿ ಯಲ್ಲಿ ಇಂಟರ್ನೆಟ್ ಸಂಪರ್ಕ ಹಾಕಿಸಿಕೊಳ್ಳುವಂತೆ ಇಂಟರ್ ಪ್ರೋವೈಡರ್ ಮಾಲೀಕ ಶೇಖರ್ ಪಿಜಿಯವರ ಬಳಿ ಕೇಳುತ್ತಿದ್ದನು. ಆದರೆ ಇಂಟರ್ನೆಟ್ ಹಾಕಿಸಿಕೊಳ್ಳಲು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಪಿಜಿ ಸಿಬ್ಬಂದಿ ಶ್ರೀನಿವಾಸ್ ಎಂಬಾತನನ್ನು ಥಳಿಸಿದ್ದಾರೆ.

ತಡರಾತ್ರಿ ಕಂಠ ಪೂರ್ತಿ ಮದ್ಯ ಸೇವಿಸಿ ಬಿಯರ್ ಬಾಟಲ್ ಜೊತೆಗೆ ಗ್ಯಾಂಗ್ ಅನ್ನು ಕರೆತಂದು ಪಿಜಿ ಸಿಬ್ಬಂದಿ ಶೇಖರ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆಗೆ ಯತ್ನಿಸಿ ಪಿಜಿ ಕಚೇರಿಯ ಮುಂಭಾಗದ ಗ್ಲಾಸ್ ಅನ್ನು ಪುಡಿ ಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಪಿಜಿ ಮುಂಭಾಗದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments