ವೃದ್ಧಾಪ್ಯ ವೇತನವೂ ಇಲ್ಲ, ಪಡಿತರ ಅಕ್ಕಿಯೂ ಇಲ್ಲ: ಪ್ರವಾಹ ಸಂತ್ರಸ್ತೆ ಅಜ್ಜಿ ಅಳಲು

Webdunia
ಶನಿವಾರ, 31 ಜುಲೈ 2021 (18:06 IST)
ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಾಮಪೂರದ ಬಿಎಸ್‌ಎನ್‌ಎಲ್ ಕಚೇರಿ ಹತ್ತಿರವಿರುವ ೭೭ ವರ್ಷ ವಯಸ್ಸಿನ ವೃದ್ಧೆ ದುಂಡವ್ವ ಕರೋಳಿ ಎಂಬುವಳ ಯಾತನೆ ಹೇಳತೀರದು. ೨೦೦೫ ನೇ ಸಾಲಿನಲ್ಲಿ ದುಂಡವ್ವ ಕಂದಾಯ ಇಲಾಖೆ ಮಾಸಿಕ ೪೦೦ ರೂಪಾಯಿ ವೃದ್ಧಾಪ್ಯ ವೇತನ ಮಂಜೂರು ಮಾಡಿ ಆದೇಶ ನೀಡಿದೆ. ಈಲ್ಲಾ ಖಜಾನೆ ತಯಾರಿಸಿರುವ ವೃದ್ಧಾಪ್ಯ ವೇತನ ಫಲಾನುಭವಿ ಪಟ್ಟಿಯಲ್ಲಿ ಮತ್ತು ಪ್ರತಿ ತಿಂಗಳು ಖಜಾನೆಯಿಂದ ಅಂಚೆ ಕಚೇರಿಗೆ ವಕ ಸದಸ ವೇತನ ಸಂದಾಯವಾಗುತ್ತಿತ್ತು.
 ಕಳೆದೊಂದು ವರ್ಷದಿಂದ ಹಣ ಬರುತ್ತಿಲ್ಲ. ಪಡಿತರ ಅಕ್ಕಿಯಂತು ವೃದ್ಧೆಗೆ ಗಗನಕುಸುಮವಾಗಿದೆ. ಕಳೆದ ೧೦ ವರ್ಷಗಳಿಂದ ಹಲವಾರು ಸರ್ಕಾರಿ ಕಚೇರಿ ಅಲೆದು ಸುಸ್ತಾಗಿ ಕೊನೆಗೂ ಪಡಿತರ ಅಕ್ಕಿ ದೊರಕದೆ ಉಪವಾಸದಲ್ಲಿಯೇ ಬದುಕು ಸಾಗಿಸುತ್ತಿದ್ದಾಳೆ. ಸುತ್ತಲಿನ ಕುಟುಂಬಗಳು ಇವಳ ಸಮಸ್ಯೆ ಅರಿತು ದಿನಂಪ್ರತಿ ಊಟ, ಉಪಚಾರ ಮಾಡುತ್ತಿದ್ದರೆ ಒಂದೊಂದು ಹೊತ್ತು ಉಪವಾಸವೇ ಗತಿಯಾಗಿದೆ.
ಬಾಗಿದ ಶರೀರ, ಪತಿ, ಮಕ್ಕಳು ಇಲ್ಲದೆ ಒಬ್ಬಂಟಿಯಾಗಿ ಸುರೇಶ ಹಟ್ಟಿ ಎಂಬುವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಕಾಲ ಕಳೆಯುತ್ತಿರುವ ವೃದ್ಧೆ ದುಂಡವ್ವಳಿಂದ ಮನೆ ಬಾಡಿಗೆಯೆಂದು ಒಂದು ಪೈಸೆಯೂ ಹಣವನ್ನು ಸುರೇಶ ಪಡೆದಿಲ್ಲ. 
ಇವಳ ನಿತ್ಯ ಗೋಳು, ಸಮಸ್ಯೆ ಕೇಳಿ ಮನೆ ನೀಡಿದ್ದಲ್ಲದೆ ಉಪಚಾರದಲ್ಲಿಯೂ ತೊಡಗಿರುವದು ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭ್ರಷ್ಟಾಚಾರ ನಮ್ಮ ಕಾಲದ್ದಾ, ನಿಮ್ಮ ಕಾಲದ್ದಾ: ಸಿದ್ದರಾಮಯ್ಯಗೆ ದಾಖಲೆ ನೀಡಿದ ಆರ್ ಅಶೋಕ್

ಬಿಜೆಪಿ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೊರಟಿದೆ: ಸಿಎಂ ಸಿದ್ದರಾಮಯ್ಯ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಪಾಕಿಸ್ತಾನ ಸಂಸತ್ತಿನೊಳಗೆ ಎಂಟ್ರಿ ಕೊಟ್ಟ ಕತ್ತೆ: ಫುಲ್ ಕಾಮಿಡಿ ವಿಡಿಯೋ

ಇಂಡಿಗೋ ಅವ್ಯವಸ್ಥೆ... ಮಗಳಿಗೆ ಪ್ಯಾಡ್ ಬೇಕು ಎಂದು ಸಿಬ್ಬಂದಿ ಬಳಿ ಅಂಗಲಾಚಿದ ತಂದೆ Video

ಮುಂದಿನ ಸುದ್ದಿ
Show comments