Select Your Language

Notifications

webdunia
webdunia
webdunia
webdunia

ಇಂದಿನಿಂದ ಮಹಾರಾಷ್ಟ್ರ ಸರಕುಗಳು ಬ್ಯಾನ್..!!

ಇಂದಿನಿಂದ ಮಹಾರಾಷ್ಟ್ರ ಸರಕುಗಳು ಬ್ಯಾನ್..!!
ಬೆಂಗಳೂರು , ಸೋಮವಾರ, 20 ಡಿಸೆಂಬರ್ 2021 (15:01 IST)
ಮಹಾರಾಷ್ಟ್ರದ ಎಂಇಎಸ್ ಪುಂಡರ ವಿರುದ್ಧ ಬೆಂಗಳೂರು ಎಪಿಎಂಸಿ ಕಾರ್ಮಿಕರ ಸಂಘಟನೆ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿದೆ. ಇಂದಿನಿಂದ ಬೆಂಗಳೂರು ಎಪಿಎಂಸಿಯಲ್ಲಿ ಮಹಾರಾಷ್ಟ್ರ ವಸ್ತುಗಳಿಗೆ ನಿರ್ಬಂಧ ಹೇರಲು ಮುಂದಾಗಿದ್ದು, ಮಹಾರಾಷ್ಟ್ರ ವಸ್ತುಗಳು ನೋ ಲೋಡ್, ನೋ ಅನ್ ಲೋಡ್‍ಗೆ ನಿರ್ಧಾರ ಮಾಡಿದೆ.ಮಹಾರಾಷ್ಟ್ರ ವಸ್ತುಗಳ ಆಮದು ಮತ್ತು ಸಾಗಾಟಕ್ಕೆ ಬ್ರೇಕ್ ಹಾಕುವ ಮೂಲಕ ಮಹಾರಾಷ್ಟ್ರಕ್ಕೆ ಶಾಕ್ ನೀಡಲು ಸಂಘಟನೆ ತಯಾರಿ ನಡೆಸಿದ್ದು, ಎಂಇಎಸ್ ಪುಂಡರು ಪುಂಡಾಟಿಕೆ ನಿಲ್ಲಿಸದಿದ್ದರೆ ಇನ್ನಷ್ಟು ತಕ್ಕ ಪ್ರತಿಫಲ ಅನುಭವಿಸುತ್ತೀರಿ ಎಂದು ಎಪಿಎಂಸಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಅರುಣ್ ಪರಮೇಶ್ ಅವರು ಎಂಇಎಸ್ ಪುಂಡರಿಗೆ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಂ.ಇ.ಎಸ್. ವಿರುದ್ಧ ಜಯ ಕರ್ನಾಟಕ ಘರ್ಜನೆ