Select Your Language

Notifications

webdunia
webdunia
webdunia
webdunia

ರೈತರ ಸಾಲ ಮನ್ನಾ ಸಂಬಂಧ ಯಾವುದೇ ಷರತ್ತು ವಿಧಿಸಿಲ್ಲ: ಸಿಎಂ ಸ್ಪಷ್ಟನೆ

ರೈತರ ಸಾಲ ಮನ್ನಾ ಸಂಬಂಧ ಯಾವುದೇ ಷರತ್ತು ವಿಧಿಸಿಲ್ಲ: ಸಿಎಂ ಸ್ಪಷ್ಟನೆ
ಬೆಂಗಳೂರು , ಶನಿವಾರ, 24 ಜೂನ್ 2017 (16:46 IST)
ರೈತರ ಸಾಲ ಮನ್ನಾಗೆ 14 ಷರತ್ತುಗಳನ್ನು ವಿಧಿಸಲಾಗಿದೆ ಎನ್ನುವದನ್ನು ಸಿಎಂ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ.
 
14 ಷರತ್ತುಗಳ ಬಗ್ಗೆ ಹಾರಿಕೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ರೈತರು ಜೂನ್ 20 ರವರೆಗೆ ಹೊಂದಿರುವ ಸಾಲ ಮನ್ನಾ ಮಾಡಲಾಗುವುದು ಎನ್ನುವ ಒಂದೇ ಒಂದು ಷರತ್ತಿದೆ ಎಂದು ತಿಳಿಸಿದ್ದಾರೆ.
 
ರಾಜ್ಯದಲ್ಲಿ 16.90 ಲಕ್ಷ ರೈತರು 50 ಸಾವಿರವರೆಗೆ ಸಾಲ ಪಡೆದಿದ್ದಾರೆ. ಅದರಲ್ಲಿ 5.5 ಲಕ್ಷ ರೈತರು 50 ಸಾವಿರಕ್ಕಿಂತ ಹೆಚ್ಚಿನ ಸಾಲ ಪಡೆದಿದ್ದಾರೆ. ಹೆಚ್ಚು ಸಾಲ ಪಡೆದ ರೈತರಿಗೆ ಬಡ್ಡಿಯೇ ಇಲ್ಲ.  ರೈತರು ಪಡೆದ ಸಾಲದಲ್ಲಿ 50 ಸಾವಿರ ರೂಪಾಯಿ ಮನ್ನಾ ಆಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
 
ಎಲ್ಲರಿಗೂ ಒಂದೇ ನ್ಯಾಯವಿರಬೇಕು ಎನ್ನುವುದು ನಮ್ಮ ಸರಕಾರದ ಧ್ಯೇಯವಾಗಿದೆ. ಆದ್ದರಿಂದ ಪ್ರತಿಯೊಬ್ಬ ರೈತರಿಗೆ ಅನ್ಯಾಯವಾಗದಂತೆ ಸಾಲ ಮನ್ನಾ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ.
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾದವನ ಸೆರೆ