Webdunia - Bharat's app for daily news and videos

Install App

Nipah Virus: ಕೇರಳವನ್ನು ನಲುಗಿಸಿದ ಈ ಖಾಯಿಲೆ ಬೆಂಗಳೂರಿಗೂ ಕಾಲಿಡುತ್ತಂತೆ

Krishnaveni K
ಬುಧವಾರ, 24 ಜುಲೈ 2024 (09:40 IST)
ಬೆಂಗಳೂರು: ಕೇರಳದಲ್ಲಿ ಭೀತಿ ಹುಟ್ಟಿಸಿರುವ ನಿಫಾ ವೈರಸ್ ಇದೀಗ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಕಾಲಿಡುವ ಭೀತಿ ಎದುರಾಗಿದೆ. ಈಗಾಗಲೇ ಡೆಂಗ್ಯೂ ಪ್ರಕರಣಗಳಿಂದ ದಾಖಲೆ ಮಾಡಿರುವ ಬೆಂಗಳೂರಿಗೆ ನಿಫಾ ವೈರಸ್ ಭೀತಿ ಎದುರಾಗಿದೆ.

ಬಾವಲಿಯ ಜೊಲ್ಲು ರಸದಿಂದ ಹರಡುವ ಮಾರಣಾಂತಿಕ ರೋಗ ನಿಫಾ ವೈರಸ್. ಈ ವೈರಸ್ ಗೆ ಈಗಾಗಲೇ ಕೇರಳದಲ್ಲಿ ಸಾವು-ನೋವುಗಳಾಗಿವೆ. ಇನ್ನೂ ಇದಕ್ಕೆ ಸರಿಯಾದ ಚಿಕಿತ್ಸೆ ಪತ್ತೆ ಮಾಡಲಾಗಿಲ್ಲ. ಇದೀಗ ಕೇರಳದಾದ್ಯಂತ ನಿಫಾ ವೈರಸ್ ಭೀತಿಯಿದೆ. ಅದರ ನಡುವೆ ಈಗ ಬೆಂಗಳೂರಿಗೂ ನಿಫಾ ವೈರಸ್ ಭೀತಿ ಕಾಡಿದೆ.

ಮನುಷ್ಯರಿಗೆ ಈ ಸೋಂಕು ತಗುಲಿದರೆ ಇನ್ನೊಬ್ಬರಿಗೆ ಹರಡುತ್ತದೆ. ಇದು ತೀವ್ರವವಾದರೆ ಸಾವೇ ಗತಿ. ಹೀಗಾಗಿ ಕೇರಳದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಅನೇಕರು ಬೆಂಗಳೂರಿಗೆ ಬರುತ್ತಾರೆ. ಹೀಗಾಗಿ ಇಲ್ಲಿ ನಿಫಾ ವೈರಸ್ ಹರಡುವ ಭೀತಿಯಿದೆ. ತೀವ್ರ ಜ್ವರ, ತಲೆನೋವು, ವಾಂತಿ, ಮಾಂಸಖಂಡಗಳಲ್ಲಿ ನೋವು ಇತ್ಯಾದಿ ಇದರ ಲಕ್ಷಣಗಳು. ರೋಗ ಉಲ್ಬಣಗೊಂಡಂತೆ ಮಾನಸಿಕವಾಗಿ ಭ್ರಮೆಗೊಳಗಾಗುತ್ತೇವೆ. ಮೆದುಳಿನಲ್ಲಿ ಉರಿಯೂತ ಸಂಭವಿಸಬಹುದಾಗಿದೆ. ಬಳಿಕ ರೋಗಿಯು ಕೋಮಾ ಸ್ಥಿತಿಗೆ ಜಾರಬಹುದು. ಹೀಗಾಗಿ ಮನೆಗಳ ಬಳಿ ಸ್ವಚ್ಛತೆ ಕಾಪಾಡುವುದು, ಪ್ರಾಣಿಗಳು ಕೆರೆದ, ಗೀರಿದ ಗಾಯಗಳಿರುವ ಹಣ್ಣು, ತರಕಾರಿಗಳನ್ನು ಸೇವಿಸದೇ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Cabinet reshuffle: ಸಿದ್ದರಾಮಯ್ಯ ಸಂಪುಟದಲ್ಲಿ ಇಷ್ಟು ಸಚಿವರಿಗೆ ಕೊಕ್, ಲಿಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ

Indore Raja Raguvamshi Case: ಸೊಸೆಯ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ರಾಜ ರಘುವಂಶಿ ತಾಯಿ

Coastal Karnataka: ಕರಾವಳಿಯ ಮಳೆಗಾಲದ ಅತಿಥಿ ಕಲ್ಲಣಬೆಗೆ ಭಾರೀ ಡಿಮ್ಯಾಂಡ್‌

Modi: ಮೋದಿ ಎಲ್ಲಿ ಪ್ರಚಾರ ಸಿಗುತ್ತೋ ಅಲ್ಲಿ ಮಾತ್ರ ಹೋಗ್ತಾರಾ: ಪ್ರಲ್ಹಾದ್ ಜೋಶಿ ಏನು ಹೇಳಿದ್ರು

ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ, ಬಿಜೆಪಿ ಅಧಿಕಾರ ಹಿಡಿಯುತ್ತೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಮುಂದಿನ ಸುದ್ದಿ
Show comments