Webdunia - Bharat's app for daily news and videos

Install App

ಬೆಂಗಳೂರು ವಿಭಜನೆಯ ವಿಧೇಯಕಕ್ಕೆ ಬಿಜೆಪಿ ಆಕ್ರೋಶ

Krishnaveni K
ಬುಧವಾರ, 24 ಜುಲೈ 2024 (09:28 IST)
ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಮಂಡಿಸಿದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಆರ್ ಅಶೋಕ್ ನಾವೂ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಇಲ್ಲೇ ಸಾಯುವವರು. ನಮ್ಮ ಜೊತೆಗೂ ಚರ್ಚಿಸಿ ಎಂದಿದ್ದಾರೆ.

ಪ್ರತಿಪಕ್ಷಗಳ ಗದ್ದಲ, ಆಕ್ಷೇಪದ ನಡುವೆಯೇ ನಿನ್ನೆ ವಿಧೇಯಕವನ್ನು ಮಂಡಿಸಲಾಗಿದೆ. ಆದರೆ ವಿಧೇಯಕ ಅಧ್ಯಯನಕ್ಕೆ ಸಮಯಾವಕಾಶ ಬೇಕೆಂದು ಬಿಜೆಪಿ ಕೇಳಿದೆ. ವಿಧಾನಸಭೆಯಲ್ಲಿ ಇದೀಗ ಅನುಮೋದನೆ ಪಡೆದರೂ ವಿಧಾನಪರಿಷತ್ ನಲ್ಲಿ ವಿಧೇಯಕಕ್ಕೆ ಅನುಮೋದನೆ ಸಿಗುವುದು ಕಷ್ಟವಾಗಿದೆ.

172 ಪುಟಗಳ ವಿಧೇಯಕವನ್ನು ಏಕಾಏಕಿ ಮಂಡಿಸಿ ಪಾಸ್ ಮಾಡುವುದು ಸರಿಯಲ್ಲ. ನಮಗೂ ಚರ್ಚೆಗೆ ಅವಕಾಶ ಕೊಡಬೇಕು ಎಂದು ಅಶೋಕ್ ಹೇಳಿದ್ದಾರೆ. 1 ಕೋಟಿ ಬೆಂಗಳೂರನ್ನು ಬಿಬಿಎಂಪಿಗೆ ಆಳಲು ಸಾಧ್ಯವಾಗುವುದಿಲ್ಲ ಎಂದರೆ ನಾಚಿಕೆಗೇಡು ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ವಿಧೇಯಕದಲ್ಲಿರುವ ಪ್ರಮುಖ ಅಂಶಗಳೆಂದರೆ ಅಧಿಸೂಚನೆ ಬಳಿಕ ಸ್ಥಳೀಯ ಸಂಸ್ಥೆಗಳ ಅಸ್ತಿತ್ವ ರದ್ದು ಮಾಡುವುದು, ನಗರ ಪಾಲಿಕೆಗಳನ್ನು ಆರ್ಥಿಕ, ಕೃಷಿ, ಉದ್ಯೋಗ, ಮೂಲ ಸೌಕರ್ಯಗಳನ್ನು ನೋಡಿಕೊಂಡು ವಿಭಜಿಸುವುದು, 4 ದಿಕ್ಕಿನ ಗಡಿ ಗುರುತಿಗೆ ಕಲ್ಲು, 5 ವರ್ಷಕ್ಕೊಮ್ಮೆ ಮೇಯರ್ ನೇಮಕ ಇತ್ಯಾದಿಗಳಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments