Webdunia - Bharat's app for daily news and videos

Install App

ಪತ್ನಿ ಲೆಟರ್ ಬರೆದಿದ್ದು ನಿಮಗೊತ್ತಿಲ್ವಾ: ಎಂಥಾ ನಾಟಕ ಮಾಡ್ತೀರಿ ಸಿದ್ದರಾಮಯ್ಯ ಎಂದ ನೆಟ್ಟಿಗರು

Krishnaveni K
ಮಂಗಳವಾರ, 1 ಅಕ್ಟೋಬರ್ 2024 (10:50 IST)
ಬೆಂಗಳೂರು: ಮುಡಾ ಹಗರಣದಲ್ಲಿ ಪತಿ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಪಾರ್ವತಿ ಸಿದ್ದರಾಮಯ್ಯ 14 ಸೈಟುಗಳನ್ನೂ ಹಿಂಪಡೆಯುವಂತೆ ಮುಡಾಗೆ ಪತ್ರ ಬರೆದಿದ್ದಾರೆ. ಈ ಪತ್ರದ ಬಗ್ಗೆ ನನಗೇ ಆಶ್ಚರ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಅವರ ಪ್ರತಿಕ್ರಿಯೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.

ನಿಮ್ಮ ಪತ್ನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಇಲ್ಲ ಅಂತೀರಿ. ಅಂತಹವರು ಪತ್ರ ಬರೆದಿದ್ದು ನಿಮಗೇ ಗೊತ್ತಿಲ್ವಾ? ನಿಮ್ಮನ್ನು ಕೇಳದೇ ಈ ನಿರ್ಧಾರ ಮಾಡುತ್ತಾರಾ? ನಮ್ಮ ಕಿವಿ ಮೇಲೆ ಹೂ ಇಡಬೇಡಿ ಸಾರ್ ಎಂದಿದ್ದಾರೆ. ಒಂದು ವೇಳೆ ನೀವು ತಪ್ಪು ಮಾಡಿಲ್ಲ ಎಂದಾದರೆ ಈ ನಾಟಕ ಎಲ್ಲಾ ಯಾಕೆ? ಸೈಟು ಹಿಂದಿರುಗಿಸುತ್ತಿರುವುದು ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಈ ಹಿಂದೆ ವಾಚ್ ಕೂಡಾ ಅಷ್ಟೇ. ನಿಮ್ಮ ಮೇಲೆ ಅಪವಾದ ಬಂದಾಗ ಹಿಂದಿರುಗಿಸಿದಿರಿ. ತಪ್ಪು ಮಾಡಿಲ್ಲ ಎಂದಾದರೆ ಭಯ ಯಾಕೆ? ಎಲ್ಲಿ ನಿಮ್ಮ ಬೇರೆ ಅಕ್ರಮ ಆಸ್ತಿಗಳೂ ಬೆಳಕಿಗೆ ಬರಬಹುದು ಎಂಬ ಭಯಕ್ಕೆ ಈ ಸೈಟುಗಳನ್ನು ಹಿಂದಿರುಗಿಸುತ್ತಿದ್ದೀರಿ ಅಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಇಷ್ಟೆಲ್ಲಾ ನಾಟಕವಾಡುವ ಬದಲು ರಾಜೀನಾಮೆ ನೀಡಿ ತನಿಖೆ ಎದುರಿಸಬಹುದಲ್ಲವೇ? ತಪ್ಪು ಮಾಡಿಲ್ಲ ಎಂದಾದರೆ ತರಾತುರಿಯಲ್ಲಿ ಅಧಿಕಾರಿಗಳೊಂದಿಗೆ, ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸುತ್ತಿರುವುದು ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments