Webdunia - Bharat's app for daily news and videos

Install App

ಪೀಣ್ಯ-ನಾಗಸಂದ್ರ ನಡುವೆ 3 ದಿನ ಮೆಟ್ರೋ ಇಲ್ಲ: ಯಾಕೆ ಇಲ್ಲಿ ನೋಡಿ

Krishnaveni K
ಗುರುವಾರ, 25 ಜನವರಿ 2024 (11:08 IST)
Namma Metro
ಬೆಂಗಳೂರು: ಪೀಣ್ಯ ಮತ್ತು ನಾಗಸಂದ್ರ ನಡುವೆ ಮೂರು ದಿನ ಮೆಟ್ರೋ ರೈಲು ಸೇವೆ ಇರಲ್ಲ ಎಂದು ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಮಾಹಿತಿ ನೀಡಿದೆ.

ಮೆಟ್ರೋದಲ್ಲಿ ಓಡಾಡುವ ಪೀಣ್ಯ ಮತ್ತು ಸುತ್ತಮುತ್ತಲಿನ ಜನರಿಗೆ ಇದು ನಿರಾಸೆಯ ಸುದ್ದಿಯಾಗಿದೆ. ಈ ವಾರ ವೀಕೆಂಡ್ ನಲ್ಲಿ ಹೆಚ್ಚುವರಿ ರಜೆಯಿದ್ದು, ಈ ವಾರದಲ್ಲಿ ಮೆಟ್ರೋದಲ್ಲಿ ಓಡಾಡುವವರಿಗೆ ಕೊಂಚ ಮಟ್ಟಿಗೆ ತೊಂದರೆಯಾಗಲಿದೆ. ಆದರೆ ಈ ಮೂರು ದಿನದ ವ್ಯತ್ಯಯಕ್ಕೆ ಕಾರಣವೂ ಇದೆ.

ನಾಳೆ ಅಂದರೆ ಜನವರಿ 26 ರಿಂದ ಜನವರಿ 28 ರವರೆಗೆ ತಾತ್ಕಾಲಿಕವಾಗಿ ಮೂರು ದಿನ ಈ ಹಸಿರು ಮಾರ್ಗದಲ್ಲಿ ಮೆಟ್ರೋ ಇರಲ್ಲ. ಜನವರಿ 29 ರಂದು ಬೆಳಿಗ್ಗೆ 5 ಗಂಟೆಯಿಂದ ಎಂದಿನಂತೆ ಮೆಟ್ರೋ ಓಡಾಟ ನಡೆಸಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ನೀಡಿದೆ.

ಮೆಟ್ರೋದ ಎರಡನೇ ಹಂತದ ಕಾಮಗಾರಿ ಇದೀಗ ಜಾರಿಯಲ್ಲಿದೆ. ಅದರಂತೆ ನಾಗಚಂದ್ರದಿಂದ ಮಾದವಾರದವರೆಗೆ ವಿಸ್ತರಿತ ಕಾಮಗಾರಿ ನಡೆಯುತ್ತಿದೆ. ಈ ಕಾರಣಕ್ಕೆ ಮೂರು ದಿನ ಸಂಚಾರ ಸ್ಥಗಿತವಾಗುತ್ತಿದೆ. ಮೆಟ್ರೋ ಇಲ್ಲದ ಕಾರಣ ಈ ಮೂರು ದಿನ ಪೀಣ್ಯ ವಲಯದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ‍್ಯತೆಯಿದೆ.

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರು ಉದ್ಯೋಗಸ್ಥರೇ ಹೆಚ್ಚಾಗಿರುತ್ತಾರೆ. ಅದರಲ್ಲೂ ಸಂಜೆ ಮತ್ತು ಬೆಳಿಗ್ಗೆ ಟ್ರಾಫಿಕ್ ದಟ್ಟಣೆಯಿಲ್ಲದೇ ಮನೆ ತಲುಪಲು ಹೆಚ್ಚಿನವರು ಮೆಟ್ರೋವನ್ನು ಆಶ‍್ರಯಿಸುತ್ತಾರೆ. ಅವರಿಗೆಲ್ಲಾ ಈ ಅಡಚಣೆಯಿಂದ ಕೊಂಚ ಮಟ್ಟಿಗೆ ತೊಂದರೆಯಾಗಬಹುದು. ಆದರೆ ಇಡೀ ಬೆಂಗಳೂರಿಗೆ ಮೆಟ್ರೋ ಸೇವೆ ವಿಸ್ತರಿಸುವ ಬಿಎಂಆರ್ ಸಿಎಲ್ ಯೋಜನೆಯಿಂದಾಗಿ ಕೆಲವೊಮ್ಮೆ ಇಂತಹ ಅಡಚಣೆಯನ್ನು ಎದುರಿಸುವುದು ಅನಿವಾರ್ಯವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments