Webdunia - Bharat's app for daily news and videos

Install App

ಮಗು ಹುಟ್ಟಿ 9 ವರ್ಷದ ಬಳಿಕ ನಾಮಕರಣ..!! ಏನಿದು??

Webdunia
ಮಂಗಳವಾರ, 20 ಸೆಪ್ಟಂಬರ್ 2022 (16:09 IST)
ಮಗಳು ಹುಟ್ಟಿ ಒಂಬತ್ತು ವರ್ಷದವರೆಗೂ ಈ ಪೋಷಕರು ತಮ್ಮ ಮಗಳಿಗೆ ಹೆಸರೇ ಇಟ್ಟಿಲ್ಲವಂತೆ… ಅರೆ ಇದೇನಿದು ಮಗುವಿಗೆ ಸಾಮಾನ್ಯವಾಗಿ ಒಂದು ವರ್ಷದ ವರೆಗೆ ಕೆಲವರು ನಾನಾ ಕಾರಣಗಳಿಂದ ನಾಮಕರಣ ಮಾಡದೆ ಮುಂದೂಡುವುದು ಸಾಮಾನ್ಯ, ಆದರೆ ಇಲ್ಲೊಂದು ಕುಟುಂಬ ಒಂದಲ್ಲ ಎರಡಲ್ಲ ಬರೋಬ್ಬರಿ ಒಂಬತ್ತು ವರ್ಷಗಳ ಕಾಲ ತಮ್ಮ ಮಗಳಿಗೆ ಹೆಸರೇ ಇಡಲಿಲ್ಲವಂತೆ, ಅದಕ್ಕೊಂದು ಕಾರಣವೂ ಇದೆ.
2013ರಲ್ಲಿ ತೆಲಂಗಾಣದ ಮಂಡಲದ ನಂದಿಗಾಮ ಗ್ರಾಮದ ಸುರೇಶ್ ಮತ್ತು ಅನಿತಾ ದಂಪತಿಗೆ ಹೆಣ್ಣು ಮಗು ಜನಿಸಿದೆ ಈ ವೇಳೆ ದಂಪತಿಗಳು ತೆಲಂಗಾಣದ ಜನಪ್ರಿಯ ನಾಯಕ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಕೈಯಿಂದಲೇ ಮಗುವಿಗೆ ನಾಮಕರಣ ಮಾಡಬೇಕೆಂಬುದು ಬಯಸಿದ್ದರು, ನಾಮಕರಣಕ್ಕಾಗಿ ಮಗುವಿನ ಪೋಷಕರು ಒಂಬತ್ತು ವರ್ಷ ಕಾಯಬೇಕಾಯಿತು ರವಿವಾರ (ಸೆಪ್ಟೆಂಬರ್ 18) ರಂದು ಆ ಸಂಭ್ರಮದ ಘಳಿಗೆ ಬಂದೊದಗಿದೆ.
 
ತೆಲಂಗಾಣದ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಅಸೆಂಬ್ಲಿ ಸ್ಪೀಕರ್ ಮಧುಸೂಧನ ಚಾರಿ ಅವರಿಗೆ ಈ ದಂಪತಿಗಳು ತಮ್ಮ ಮಗುವಿಗೆ ಹೆಸರಿಡದ ವಿಚಾರ ಹೇಗೋ ತಿಳಿಯಿತು ಅಲ್ಲದೆ ಅವರು ತೆಲಂಗಾಣದ ಮುಖ್ಯಮಂತ್ರಿ ಕೈಯಿಂದಲೇ ಮಗುವಿಗೆ ಹೆಸರಿಡಬೇಕು ಅನ್ನೋ ವಿಚಾರನು ತಿಳಿದುಕೊಂಡ ಅವರು ದಂಪತಿ ಮತ್ತು ಮಗುವನ್ನು ತೆಲಂಗಾಣ ಮುಖ್ಯಮಂತ್ರಿಯ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಭಾನುವಾರ ಬರಲು ಹೇಳಿದ್ದರು. ಅದರಂತೆ ಮುಖ್ಯಮಂತ್ರಿಗಳ ನಿವಾಸಕ್ಕೆ ದಂಪತಿಗಳು ಮಗುವಿನ ಸಮೇತ ಆಗಮಿಸಿದ್ದಾರೆ, ನಾಮಕರಣ ಮಾಡದ ವಿಚಾರ ತಿಳಿದ ತೆಲಂಗಾಣ ಸಿಎಂ ಕೆಸಿಆರ್ ಸುರೇಶ್ ಮತ್ತು ಅನಿತಾ ದಂಪತಿಗಳನ್ನು ಅಭಿನಂದಿಸಿ ಮಗಳಿಗೆ ‘ಮಹತಿ’ ಎಂದು ನಾಮಕರಣ ಮಾಡಿದ್ದಾರೆ.
 
ಇದರೊಂದಿಗೆ ದಂಪತಿಗಳ ಆಸೆಯೊಂದು ಒಂಬತ್ತು ವರ್ಷಗಳ ಬಳಿಕ ನೆರವೇರಿದಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments