Webdunia - Bharat's app for daily news and videos

Install App

ಸಿಲಿಕಾನ್​ ಸಿಟಿಯಲ್ಲಿ ಬುಸ್​​ ಬುಸ್​​​ ನಾಗಪ್ಪ ಎಂಟ್ರಿ..!

Webdunia
ಶನಿವಾರ, 17 ಸೆಪ್ಟಂಬರ್ 2022 (19:20 IST)
ಸಿಲಿಕಾನ್ ಸಿಟಿಯಲ್ಲಿ ಇದೀಗ ಬುಸ್ ಬುಸ್ ನಾಗಪ್ಪನ ಕಾಟ ಹೆಚ್ಚಾಗಿದೆ. ಸಿಟಿ ಜನರಲ್ಲಿ ಹಾವು ಭಯ ಉಂಟು ಮಾಡ್ತಿದ್ದಾನೆ. ಮಳೆ ನಿಲ್ಲುತ್ತಿದಂತೆ ಪ್ರವಾಹ ಜಾಗದಲ್ಲಿ ಹಾವುಗಳು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ಮಳೆ ಅಧಿಕವಾಗಿ ಬಂದ ಜಾಗದಲ್ಲಿ ಹಾವುಗಳು ಪ್ರತ್ಯಕ್ಷವಾಗ್ತಿವೆ. ಈ ಭಾರಿ ಅಧಿಕ ಮಳೆಯಾದ ಕಾರಣ ಕೆರೆಗಳೆಲ್ಲಾ ಕೋಡಿ ಒಡೆದಿವೆ. ಈ ಹಿನ್ನೆಲೆಯಲ್ಲಿ ಕೆರೆಯಿಂದ ಹಾವುಗಳು ಆಗಮಿಸ್ತಿದ್ದಾವೆ. ನೀರು ಕಡಿಮೆ ಆಗುತ್ತಿದ್ದದಂತೆ ಮನೆಗಳಲ್ಲಿ ಹಾವುಗಳು ಪ್ರತ್ಯಕ್ಷವಾಗಿದ್ದು, ನಾಗಪ್ಪನನ್ನು ಕಂಡ ಜನರು ದಿಗಿಲುಗೊಂಡಿದ್ದಾರೆ. ನಾಗರ ಹಾವು, ಕೆರೆ ಹಾವು, ಕೊಳಕು ಮಂಡಲ ಹಾವುಗಳು ಹೆಚ್ಚಾಗಿ ಪತ್ತೆಯಾಗ್ತಿವೆ. ಬೆಂಗಳೂರಿನಲ್ಲಿ 8 ವಲಯಗಳಲ್ಲಿ ಹಾವುಗಳು ಪತ್ತೆಯಾಗಿದ್ದು, ಕಳೆದ ಬಾರಿಗಿಂತ ಈ ವರ್ಷ ಹೆಚ್ಚು ಹಾವುಗಳು ಪತ್ತೆಯಾಗಿವೆ. ಉರಗ ತಜ್ಞರಿಗೆ ಒಂದು ವಲಯದಿಂದ ಸುಮಾರು 20ರಿಂದ 25 ಕರೆಗಳು ಬರುತ್ತಿದೆ. ಮಳೆ ನೀರು ತುಂಬಿಕೊಂಡ ಮನೆಗಳಲ್ಲಿ ಕ್ಲೀನ್ ಮಾಡುವ ವೇಳೆ ಎಚ್ಚರ ವಹಿಸುವಂತೆ ಉರಗ ತಜ್ಞರ ಮೋಹನ್ ಸೂಚಿಸಿದ್ದಾರೆ. ಆದಷ್ಟು ಶೂ ರಾಕ್, ಟಿವಿ ಸ್ಟಾಂಡ್​​​ಗಳ ಬಳಿ ಕೈ ಇಡುವಾಗ ಜಾಗೃತೆ ವಹಿಸಲು ಸಲಹೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments