Select Your Language

Notifications

webdunia
webdunia
webdunia
webdunia

ನಾಗಮಂಗಲ ಗಲಭೆಗೆ ಕುಮಾರಸ್ವಾಮಿಯೇ ಡೈರೆಕ್ಟರ್: ಡಿಕೆ ಸುರೇಶ್

ನಾಗಮಂಗಲ ಗಲಭೆಗೆ ಕುಮಾರಸ್ವಾಮಿಯೇ ಡೈರೆಕ್ಟರ್: ಡಿಕೆ ಸುರೇಶ್

Sampriya

ಬೆಂಗಳೂರು , ಶನಿವಾರ, 14 ಸೆಪ್ಟಂಬರ್ 2024 (16:24 IST)
Photo Courtesy X
ಬೆಂಗಳೂರು: ನಾಗಮಂಗಲ ಗಲಭೆ ವಿಚಾರವಾಗಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್, ಗಲಭೆಯನ್ನು ಕುಮಾರಸ್ವಾಮಿಯೇ ಮಾಡಿಸಿರಬಹುದು ಎಂದು ಕೌಂಟರ್ ಕೊಟ್ಟಿದ್ದಾರೆ.

ಮಾಧ್ಯಮಗಳ ಬಳಿ ಎಚ್‌ಡಿಕೆ ಮಾತನಾಡಿದಾಗ ಈ ಗಲಭೆಯನ್ನು ಕಾಂಗ್ರೆಸ್‌ನವರು ಮಾಡಿಸಿರಬಹುದು ಎಂದು ಹೇಳಿದ್ದರು. ಇದಕ್ಕೆ ಕೌಂಟರ್ ಕೊಟ್ಟ ಸುರೇಶ್ ಅವರು ಕುಮಾರಸ್ವಾಮಿ ನಿರ್ದೇಶನದಲ್ಲಿಯೇ ನಡೆದಿರಬಹುದು ಎಂದರು.

ಅಶಾಂತಿ ತರುವ ಉದ್ದೇಶದಿಂದ ಕುಮಾರಸ್ವಾಮಿ ಆಗಾಗ ಏನೇನೂ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದಾರೆ.  ಅದನ್ನು ನಾನು ಹೇಳಬಹುದಲ್ಲವೇ? ಅವರು ಏನು ರಾಜಕೀಯ ಆರೋಪ ಮಾಡುತ್ತಾರೆಯೋ ನಾನು ಸಹ ಅದೇ ರೀತಿ ಮಾಡುತ್ತೇನೆ ಎಂದು ಡಿಕೆ ಸುರೇಶ್ ಹೇಳಿದರು.

ಅಲ್ಪಸಂಖ್ಯಾತರ ಓಲೈಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ಅವರು, ಕಾನೂನಿನ ಪ್ರಕಾರ ಎಲ್ಲರೂ ಒಂದೇ. ನಾವು ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಕನಸು, ಬಸವಣ್ಣನವರ ತತ್ವಗಳು, ಅಂಬೇಡ್ಕರ್ ಅವರ ಆಶಯ, ಗಾಂಧೀಜಿಯವರ ಕನಸಿನ ಮೇಲೆ ಕಾಂಗ್ರೆಸ್ ನಡೆಯುತ್ತಿದೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ನಂದಿನಿ ಹಾಲಿನ ದರ ಹೆಚ್ಚಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ: ಬಿಜೆಪಿ ಎಚ್ಚರಿಕೆ