Publish Date: Sun, 18 Dec 2022 (14:08 IST)
Updated Date: Sun, 18 Dec 2022 (14:11 IST)
ನಗರದಲ್ಲಿ ಪದೇ ಪದೇ ಪುಂಡರ ಅಟ್ಟಹಾಸ ಮೀತಿಮಿರಿದೆ.ವ್ಯಾಪಾರಿಯೊಬ್ಬನಿಗೆ ಲಾಂಗ್ ಬೀಸಿ ಹಲ್ಲೆಗೆ ಯತ್ನ ನಡೆಸಲಾಗಿದೆ. ಲಾಂಗ್ ಬೀಸಿದ ಪುಂಡವ್ಯಾಪಾರಿ ಜಸ್ಟ್ ಮಿಸ್ ಆಗಿದ್ದಾರೆ.ಹಪ್ತಾ ವಸೂಲಿಗಾಗಿ ಹಲ್ಲೆ ಯತ್ನ ನಡೆದಿದೆ.ಮೀನಿನ ವ್ಯಾಪಾರಿ ಮೇಲೆ ಲಾಂಗ್ ಬೀಸಿ ಹಲ್ಲೆಗೆ ಕಿಡಿಗೇಡಿ ಮುಂದಾಗಿದ.ಸ್ವಲ್ಪ ಯಾಮಾರಿದ್ರೂ ಬೀಳ್ತಿತ್ತು ಹೆಣ.ಬಾಣಸವಾಡಿಯ ಜೈಭಾರತ್ ನಗರದಲ್ಲಿ ಘಟನೆ ನಡೆದಿದೆ.ಹಫ್ತಾ ಕೊಡಲಿಲ್ಲ ಎಂದು ಮೀನಿನ ವ್ಯಾಪಾರಿ ಮೇಲೆ ಲಾಂಗ್ ಬೀಸಿ ಪುಂಡಾಟ ಮೆರೆದಿದ್ದಾನೆ .ನಗರದಲ್ಲಿ ಹೆಚ್ಚಾಗ್ತಿದೆ ಪುಡಿ ರೌಡಿಗಳ ಹಾವಳಿ .ಸಾರ್ವಜನಿಕರಿಗೆ ಭಯ ಬೀಳಿಸೋ ದುಷ್ಕರ್ಮಿಗಳ ವಿರುದ್ಧ ಕ್ರಮ ಯಾವಾಗ ?ದಿನೇ ದಿನೇ ಪುಡಿ ರೌಡಿಗಳ ಸಂಖ್ಯೆ ನಗರದಲ್ಲಿ ಹೆಚ್ಚಾಗ್ತಿದೆ .ಇನ್ನೂ ಈ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.