Webdunia - Bharat's app for daily news and videos

Install App

ಕಾದಾಡುತ್ತಾ ರಸ್ತೆಗೇ ಬಂದ ಮೈಸೂರು ದಸರಾ ಆನೆಗಳು ವಿಡಿಯೋ ಇಲ್ಲಿದೆ

Krishnaveni K
ಶನಿವಾರ, 21 ಸೆಪ್ಟಂಬರ್ 2024 (09:33 IST)
Photo Credit: X
ಮೈಸೂರು: ಮೈಸೂರು ಅರಮನೆ ದಸರಾ ಸಂಭ್ರಮಕ್ಕೆ ಕರೆತರಲಾಗಿರುವ ಆನೆಗಳು ಕಾದಾಡುತ್ತಾ ರಸ್ತೆಗೇ ಬಂದು ಬಿಟ್ಟಿದ್ದು, ಕೆಲವು ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ಮೈಸೂರು ದಸರಾಗೆ ತಯಾರಿ ಆರಂಭವಾಗಿದ್ದು, ಆನೆಗಳು ಅರಮನೆ ಆವರಣದಲ್ಲಿ ಬೀಡುಬಿಟ್ಟಿವೆ. ಈ ಪೈಕಿ ಗಜಪಡೆಯ ಕಂಜನ್ ಮತ್ತು ಧನಂಜಯ ಆನೆ ನಡುವೆ ಊಟ ಮಾಡುವ ಸಮಯದಲ್ಲಿ ಕಾದಾಟ ಶುರುವಾಗಿದೆ. ಧನಂಜಯ ಆನೆ ಕಂಜನ್ ಮೇಲೆ ದಾಳಿ ನಡೆಸಿದೆ. ಬೆದರಿದ ಕಂಜನ್ ಆನೆ ಮಾವುತನಿಲ್ಲದೇ ಅರಮನೆಯ ಮುಖ್ಯದ್ವಾರದಿಂದ ನೇರವಾಗಿ ರಸ್ತೆಗೇ ಬಂದಿದೆ. ಅದರ ಹಿಂದೆಯೇ ಧನಂಜಯ ಆನೆ ಕೂಡಾ ಬಂದಿದೆ.

ಇದರಿಂದ ಬೆದರಿದ ಕಂಜನ್ ದೊಡ್ಡಕೆರೆ ಮೈದಾನದ ಗೇಟ್ ತಳ್ಳಿಕೊಂಡು ರಸ್ತೆಯತ್ತ ಓಡಿದೆ. ಧನಂಜಯ ಆನೆ ಮೇಲಿದ್ದ ಮಾವುತ ಕಷ್ಟಪಟ್ಟು ಆತನನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಧನಂಜಯ ಅಟ್ಟಾಡಿಸುವುದು ನಿಂತಾಗ ಕಂಜನ್ ಆನೆ ಕೂಡಾ ನಿಂತಿದ್ದಾನೆ. ಬಳಿಕ ಮಾವುತ ಎರಡೂ ಆನೆಗಳನ್ನೂ ಉಪಾಯವಾಗಿ ಅರಮನೆ ಆವರಣದೊಳಗೆ ಕರೆದೊಯ್ದಿದ್ದಾನೆ.

ಮಾವುತನ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಧನಂಜಯ ಆನೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ನೋಡಿ ಕಂಜನ್ ಆನೆಯೂ ಕೊಂಚ ಗಲಿಬಿಲಿಯಾಗಿತ್ತು. ಇಲ್ಲದೇ ಹೋಗಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು. ಆನೆಗಳ ಕಾದಾಟದ ವಿಡಿಯೋ ಇಲ್ಲಿದೆ:

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments