Webdunia - Bharat's app for daily news and videos

Install App

ಮೈಸೂರು ದಸರಾ: ಜನಮನಸೂರೆಗೊಂಡ ತ್ರಿಭಾಷಾ ವಚನ ಗಾಯನ

Webdunia
ಗುರುವಾರ, 18 ಅಕ್ಟೋಬರ್ 2018 (15:30 IST)
ಜಗತ್ ಪ್ರಸಿದ್ಧ ಮೈಸೂರು ದಸರಾ ಉತ್ಸವದ ಅಂಗವಾಗಿ ಕಲಾಮಂದಿರದಲ್ಲಿ  ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತ್ರಿಭಾಷಾ ವಚನ ಗಾಯನ ಎಲ್ಲರ ಗಮನ ಸೆಳೆಯಿತು.

      ಕಲಬುರಗಿಯ ಜಿ.ಚಂದ್ರಕಾಂತ್ ಅವರ ತ್ರಿಭಾಷಾ ವಚನ ಗಾಯನ ಮೈಸೂರು ದಸರಾದಲ್ಲಿ ಗಮನ ಸೆಳೆಯಿತು.  ಬಸವಣ್ಣನವರ ವಚನಗಳನ್ನು ಕನ್ನಡ, ಹಿಂದಿ ಮತ್ತು ಇಂಗ್ಲೀಷ್  ಭಾಷೆಗಳಲ್ಲಿ ಹಾಡುವ ಮೂಲಕ ಎಲ್ಲರ ಮನಸೂರೆಗೊಂಡರು. ಪ್ರಾರಂಭದಲ್ಲಿ " ಉಳ್ಳವರು ಶಿವಾಲಯ ಮಾಡುವರು......" ವಚನವನ್ನು ಮಧುವಂತಿ ರಾಗದಲ್ಲಿ ಸುಮಧುರವಾಗಿ ಹಾಡಿದರು.

ನಂತರ ಕಲಾವತಿ ರಾಗದಲ್ಲಿ "ನಾದಪ್ರಿಯ ಶಿವನೆಂಬುವರು...", ಬಿಲಾಸಖಾನಿ ತೋಡಿ ರಾಗದಲ್ಲಿ "ಸ್ವಾಮಿ ನೀನು ಶಾಶ್ವತ ನೀನು....", ಜೀವನಪುರಿ ರಾಗದಲ್ಲಿ "ಕಳಬೇಡ ಕೊಲಬೇಡ....." ವಚನಗಳನ್ನು ಸುಮಧುರವಾಗಿ ಹಾಡಿದರು. ಭೈರವ ರಾಗದಲ್ಲಿ "ಪಾಪಿಯಧನ ಪ್ರಾಯಶ್ಚಿತ್ತಕಲ್ಲದೆ...." ವಚನ ಗಾಯನದ ಮೂಲಕ ಕಾರ್ಯಕ್ರಮ ಕೊನೆಗೊಳಿಸಿದರು.

         ತ್ರಿಭಾಷಾ ವಚನ ಗಾಯನ ಕಾರ್ಯಕ್ರಮಕ್ಕೆ ಗುರುಶಾಂತಯ್ಯ ಸ್ಥಾವರಮಠ ಹಾರ್ಮೊನಿಯಂ ಸಾಥ್ ಹಾಗೂ ವೀರಭದ್ರಯ್ಯ ಸ್ಥಾವರಮಠ ತಬಲಾ ಸಾಥ್ ನೀಡಿದರು. ಜಿಎಸ್‍ಎಸ್ ನಿವೃತ್ತ ಪ್ರಾಚಾರ್ಯ ಪ್ರೊ. ರಾಮಮೂರ್ತಿರಾವ    ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಅಧಿಕಾರಿ  ಕುಮಾರಸ್ವಾಮಿ ಹಾಜರಿದ್ದರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments