Select Your Language

Notifications

webdunia
webdunia
webdunia
webdunia

ಮೃತ್ಯುಕೂಪವಾದ ಮೃತ್ಯುಂಜಯ ಕೆರೆ

ಮೃತ್ಯುಕೂಪವಾದ ಮೃತ್ಯುಂಜಯ ಕೆರೆ
ಹುಬ್ಬಳ್ಳಿ , ಮಂಗಳವಾರ, 1 ಅಕ್ಟೋಬರ್ 2019 (16:48 IST)
ಆ ಕೆರೆಯ ಹೆಸರು ಮೃತ್ಯುಂಜಯ. ಆದರೆ ಅದು ಬಾಲಕರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.

ಕೆರೆಯಲ್ಲಿ‌ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು‌ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಧಾರವಾಡದ ಕಲಘಟಗಿಯ ಮೃತ್ಯುಂಜಯ ‌ಕೆರೆ( ರುಸ್ತುಂಸಾಬ್ ) ಕೆರೆಯಲ್ಲಿ ಘಟನೆ ನಡೆದಿದೆ.‌ ದುಮ್ಮವಾಡ ಗ್ರಾಮದ ವಿನಯ ಕುಂಬಾರ (15), ಅನುಫ್ ಹುಬ್ಬಳ್ಳಿ (15) ಮೃತಪಟ್ಟವರು. ಇಬ್ಬರೂ ದುಮ್ಮವಾಡದ ಆದರ್ಶ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಮಧ್ಯಾಹ್ನ ಕೆರೆಯಲ್ಲಿ‌ ಈಜಲು ಹೋಗಿ ಸಾವನ್ನಪ್ಪಿದ್ದಾರೆ.

ಇಬ್ಬರ ಶವಗಳು ಇನ್ನು ಪತ್ತೆಯಾಗಿಲ್ಲ. ಅಗ್ನಿ ಶಾಮಕ ‌ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ತಡರಾತ್ರಿವರೆಗೂ ಶೋಧ ಕಾರ್ಯ ನಡೆಸಿದ್ದಾರೆ.‌ ಈ ಸಂಬಂಧ ಕಲಘಟಗಿ‌ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಪಾರ್ಸಲ್ ನಿಂದ ಕಂಗಾಲಾದ ರೆಸ್ಟೊರೆಂಟ್ ಮಾಲೀಕರು