Select Your Language

Notifications

webdunia
webdunia
webdunia
webdunia

ಬಹುಮನಿ ಸುಲ್ತಾನ್ ಯಾರು– ಕಾಗೋಡು ತಿಮ್ಮಪ್ಪ ಪ್ರಶ್ನೆ

ಬಹುಮನಿ ಸುಲ್ತಾನ್ ಯಾರು– ಕಾಗೋಡು ತಿಮ್ಮಪ್ಪ ಪ್ರಶ್ನೆ
ಉಡುಪಿ , ಬುಧವಾರ, 14 ಫೆಬ್ರವರಿ 2018 (20:23 IST)
ಬಹುಮನಿ ಸುಲ್ತಾನ್ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ಮುಂದಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಬಹುಮನಿ ಸುಲ್ತಾನ್ ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
 
ಉಡುಪಿಯಲ್ಲಿ ಮಾತನಾಡಿದ ಅವರು, ಬಹುಮನಿ ಸುಲ್ತಾನ್ ಯಾರು, ಬಹುಮನಿ ಸುಲ್ತಾನ್ ಬಗ್ಗೆ ನನಗೆ ಗೊತ್ತಿಲ್ಲ. ಆ ಕಾಲದಲ್ಲಿ ನಾನು, ನೀವು ಯಾರು ಹುಟ್ಟಿರಲಿಲ್ಲ. ಯಾವನು ಏನು ಚರಿತ್ರೆ ಬರೆದನೋ ಗೊತ್ತಿಲ್ಲ. ಚರಿತ್ರೆ ಬರೆದವರು ಅವರ ಆಲೋಚನೆ ಮತ್ತು ಮಾನಸಿಕ ಸ್ಥಿತಿಗೆ ಅನುಗುಣವಾಗಿ ಚರಿತ್ರೆ ಬರೆದಿರುತ್ತಾರೆ ಎಂದು ತಿಳಿಸಿದ್ದಾರೆ.
 
ಇದೇವೇಳೆ ಕುವೆಂಪು ಅವರ ಬಗ್ಗೆ ಮಾತನಾಡಿ ಕುವೆಂಪು ಅವರು ಬರೆದ ಹಾಡು ನಾಡಗೀತೆ ಆಗಿದೆ. ಆದರೆ, ಆಗಿನ ಸಂದರ್ಭದಲ್ಲಿ ವಿರೋಧ ಬಂದಿದ್ದರೆ ಅದೂ ಆಗ್ತಾ ಇರಲಿಲ್ಲವೇನೋ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಟಿಪ್ಪು ಸುಲ್ತಾನ್‌ನ ತದ್ರೂಪ ಬಹುಮನಿ ಸುಲ್ತಾನ್– ಕೋಟಾ ಶ್ರೀನಿವಾಸ ಪೂಜಾರಿ