Select Your Language

Notifications

webdunia
webdunia
webdunia
webdunia

ಎಂಟಿಬಿ V/S ಶರತ್ ಟಾಕ್ ವಾರ್

ಎಂಟಿಬಿ V/S ಶರತ್ ಟಾಕ್ ವಾರ್
bangalore , ಶುಕ್ರವಾರ, 21 ಅಕ್ಟೋಬರ್ 2022 (18:30 IST)
ಸಚಿವ ಎಂ.ಟಿ.ಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ ನಡುವೆ ಟಾಕ್ ವಾರ್ ಮುಂದುವರೆದಿದೆ. ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಸ್ಮಶಾನ ಜಾಗ ಒತ್ತುವರಿ ಆರೋಪ ಕೇಳಿಬಂದಿದೆ. ತೆನೆಯೂರು ಗ್ರಾಮದ ಸ್ಮಶಾನ ಜಾಗ ಶಾಸಕರ ಹೆಸರಿನಲ್ಲಿದೆ ಎಂದು ಎಂ.ಟಿ.ಬಿ ನಾಗರಾಜ್ ಆರೋಪಿಸಿದ್ದಾರೆ. ಈ ಆರೋಪಕ್ಕೆ ಶಾಸಕ ಶರತ್​ ಬಚ್ಚೇಗೌಡ ತಿರುಗೇಟು ನೀಡಿದ್ದಾರೆ. ಕೋರ್ಟ್​​ಗೆ ಹೋಗುವುದು ನ್ಯಾಯ ಕೇಳಲು, ಅನ್ಯಾಯ ಮಾಡಿ ಹೋಗಿಲ್ಲ. ಆಪರೇಷನ್ ಕಮಲದ ಸಮಯದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ಯಾಕೆ..? ಎಂ.ಟಿ.ಬಿ ನಾಗರಾಜ್ ಅಧಿಕಾರಿಗಳನ್ನ ದುರುಪಯೋಗ ಪಡಿಸಿಕೊಳ್ತಿದ್ದಾರೆ. ತೆನೆಯೂರು ಗ್ರಾಮದ ಸರ್ವೇ ನಂ.20ರಲ್ಲಿ 4 ಎಕರೆ ಸ್ಮಶಾನ ಜಾಗ ಇದೆ. ರಾಜಕಾಲುವೆ ಒತ್ತುವರಿ ಮಾಡಿ ಬಾಗ್ಮನೆ ಟೆಕ್ ಪಾರ್ಕ್ ನಿರ್ಮಾಣ ಮಾಡಿದ್ದಾರೆ. ಕೆಡವಲು ಬಂದ ಅಧಿಕಾರಿಗಳನ್ನ ತಡೆದಿದ್ದು ಯಾಕೆ..? ಮೊದಲು ಅದಕ್ಕೆ ಉತ್ತರ ನೀಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 4 ದಿನ ಮಳೆ ಮುನ್ಸೂಚನೆ