Webdunia - Bharat's app for daily news and videos

Install App

ಎಣ್ಣೆ ಬೇಕು ಅಣ್ಣಾ - MSIL ಎಣ್ಣೆನೇ ಬೇಕು ತಮ್ಮಾ

Webdunia
ಭಾನುವಾರ, 22 ಸೆಪ್ಟಂಬರ್ 2019 (21:26 IST)
ಎಣ್ಣೆ ಬೇಕು ಅಣ್ಣಾ... ಎಂ ಎಸ್ ಐ ಎಲ್ ಎಣ್ಣೆನೇ ಬೇಕು ತಮ್ಮಾ ಎಂಬ ಮಾತುಗಳು ಬಲವಾಗಿ ಕೇಳಿಬರಲಾರಂಭಿಸಿವೆ.

ಹೈ ಹೋಲ್ಟೇಜ್ ಕ್ಷೇತ್ರ ಎಂದೇ ಗುರುತಿಸಿಕೊಂಡಿರುವ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣ ಸಣ್ಣ ವಿಷಯಗಳು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಎಣ್ಣೆ ರಾಜಕೀಯ ಶುರುವಾಗಿದೆ. ಎಂ ಎಸ್ ಐ ಎಲ್ ಮಳಿಗೆ ಮುಚ್ಚಿಸುವಂತೆ ಒಂದು ಬಣ ಹೋರಾಟ ಮಾಡಿದ್ರೆ, ಇದರ ಬೆನ್ನಲ್ಲೇ ಮತ್ತೊಂದು ಬಣ ಎಂ ಎಸ್ ಐ ಎಲ್ ಉಳಿಸಿ, ಖಾಸಗೀ ವೈನ್ ಸ್ಟೋರ್ ಗಳನ್ನ ಮುಚ್ಚಿಸಿ ಎಂದು ಪ್ರತಿಭಟನೆ ಮಾಡಿದರು. ಖಾಸಗಿ ವೈನ್ ಸ್ಟೋರ್ ಗಳ ಮುಂದೆ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಬಳಿಕ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಗೌರಿಶಂಕರ್, ಎಂ ಎಸ್ ಐ ಎಲ್ ನಿಗಮ ಮಂಡಳಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹೋಬಳಿಗೊಂದು ಎಂ ಎಸ್ ಐ ಎಲ್ ಮದ್ಯದಂಗಡಿ ಮಳಿಗೆ ತೆರೆಯಬೇಕೆಂಬ ಸರ್ಕಾರದ ನಿಯಮದಂತೆ ಹೆಬ್ಬೂರಿಗೆ ಎಂ ಎಸ್ ಐ ಎಲ್ ಮದ್ಯ ಮಾರಾಟ ಮಳಿಗೆ ಮಂಜೂರು ಮಾಡಿದ್ದರು. ಈಗಾಗಲೇ ಹೆಬ್ಬೂರಿಲ್ಲಿ ನಾಲ್ಕೈದು ಖಾಸಗಿ ವೈನ್ ಸ್ಟೋರ್, ಬಾರ್ ಗಳಿದ್ದು ಅಧಿಕ ಬೆಲೆ, ಕಳಪೆ ಗುಣಮಟ್ಟದ ಮಧ್ಯವನ್ನ ಮಾರಾಟ ಮಾಡುತ್ತಿದ್ದಾರೆ  ಎಂದು ಗುಣಮಟ್ಟದ ಮದ್ಯ, ಕಡಿಮೆ ಬೆಲೆಯ ಎಂ ಎಸ್ ಐ ಎಲ್ ಗೆ ಜನರು ಮುಗಿಬಿದ್ದಿದ್ದಾರೆ.

ಹೀಗಾಗಿ ಎಂ ಎಸ್ ಐ ಎಲ್ ಮಳಿಗೆ ತೆರೆದ ಒಂದು ವಾರದಲ್ಲೆ ಖಾಸಗಿ ವೈನ್ ಸ್ಟೋರ್ ಗಳಿಗೆ ಲಕ್ಷಗಟ್ಟಲೇ ನಷ್ಟ ವುಂಟಾಗಿದೆ ಎನ್ನಲಾಗಿದೆ. ಇದರಿಂದ ಖಾಸಗಿ ವೈನ್ ಸ್ಟೋರ್ ಹಾಗೂ ಬಾರ್ ಮಾಲಿಕರು ಮಾಜಿ ಶಾಸಕ ಸುರೇಶ್ ಗೌಡ ಮುಖಾಂತರ ಸರ್ಕಾರದ ಮೇಲೆ ಒತ್ತಡ ತಂದು ಎಂ ಎಸ್ ಐ ಎಲ್ ಮುಚ್ಚಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. 



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ರಾಜಾ ರಘುವಂಶಿ ಹತ್ಯೆಗೆ ಬಳಿಸಿದ್ದ ಮಚ್ಚು ವಶಕ್ಕೆ, ಪ್ರಾಣ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಹೊರಡಿದ್ದ ಉದ್ಯಮಿ

ಮುಂದಿನ ಸುದ್ದಿ
Show comments