Webdunia - Bharat's app for daily news and videos

Install App

ಟ್ರಾಫಿಕ್ ಫೈನ್ ಕಟ್ಟಲು ಮುಗಿಬಿದ್ದ ವಾಹನ ಸವಾರರು

Webdunia
ಶನಿವಾರ, 11 ಫೆಬ್ರವರಿ 2023 (20:34 IST)
ಟ್ರಾಫಿಕ್ ಫೈನ್ ಕಟ್ಟಲು ಸರ್ಕಾರ ಕೊಟ್ಟಿದ್ದ 50% ಡಿಸ್ಕೌಂಟ್ ಆಫರ್ ಗೆ  ಇಂದೇ ಕೊನೆ ದಿನ. ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಇಂದು ವಾಹನ ಸವಾರರು ನಾ ಮುಂದು ತಾ ಮುಂದು ಅಂತ ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ಟಿಎಂಸಿ ಕೇಂದ್ರದಲ್ಲಿ ಕ್ಯೂ ನಿಂತಿದ್ದರು.ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಬಾಕಿ ಉಳಿಸಿಕೊಂಡಿರುವ ವಾಹನಗಳ ದಂಡ ಕಟ್ಟಲು ಸರ್ಕಾರ ೫೦% ರಿಯಾಯಿತಿ ನೀಡಿದ್ದರು. 50% ಡಿಸ್ಕೌಂಟ್ ಗೆ ಇಂದು ಕೊನೆಯ ದಿನವಾದ್ದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ವಾಹನ ಸವಾರರು ಇಂದು ದಂಡ ಕಟ್ಟಲು ಮುಗಿಬಿದ್ದಿದ್ದಾರೆ.  ನಗರದ ಪೊಲೀಸ್ ಠಾಣೆಗಳು, ಟಿಎಂಸಿ ಕೇಂದ್ರ ಕಚೇರಿ ಹಾಗೂ ಪೇಟಿಎಂ ಮತ್ತು ಪಿಡಿಎ ಮೂಲಕ ಲಕ್ಷಾಂತರ ಮಂದಿ ವಾಹನ ಸವಾರರು ಇಂದು ದಂಡ ಕಟ್ಟಿದ್ದಾರೆ.

ಫೈನ್ ಕಟ್ಟಲು ಇಂದು ಲಾಸ್ಟ್ ಡೇ ಅಂತ ತಿಳಿದ ವಾಹನ ಸವಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ವಾಹನಗಳ ಮೇಲಿರುವ ಹಳೇ ಕೇಸ್ ಗಳ ದಂಡ ಪಾವತಿ ಮಾಡಿದರು. ಇದೇ ವೇಳೆ ಕೆಲವು ಸವಾರರು ಈ ಕಾಲಾವಕಾಶ ಸಾಗುತ್ತಿಲ್ಲ. ರಿಯಾಯಿತಿ ದಂಡ ಪಾವತಿಗೆ ಇನ್ನೂ ಒಂದು ವಾರ ಕಾಲಾವಕಾಶ ವಿಸ್ತರಣೆ ಮಾಡಬೇಕು ಅಂತ ಒತ್ತಾಯ ಮಾಡಿದ್ದಾರೆ. ಅಲ್ಲದೆ ಕೆಲವರ ಬಳಿ ಹಣ ಇರುತ್ತೆ, ಇನ್ನೂ ಕೆಲವರ ಬಳಿ ಹಣ ಇರಲ್ಲ. ಹಾಗೂ ಸರ್ವರ್ ಗಳು ಇವತ್ತು ಜಾಮ್ ಆಗಿದ್ದು, ದಂಡ ಕಟ್ಟಲು ಸಾಧ್ಯವಾಗುತ್ತಿಲ್ಲ ಅದ್ದರಿಂದ ಇನ್ನೂ ನಾಲ್ಕೈದು ದಿನಗಳ ಕಾಲ ಸಮಯ ಕೊಡಬೇಕು ಅಂತ ಒತ್ತಾಯ ಮಾಡಿದ್ದಾರೆ.

ಇನ್ನೂ ಟ್ರಾಫಿಕ್ ಫೈನ್ ಕಟ್ಟಲು ರಿಯಾಯಿತಿ ಘೋಷಣೆ ಬಳಿಕ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದೆ. ಫೆಬ್ರವರಿ 3 ರಿಂದ ಇಂದಿನವರೆಗೆ ಸುಮಾರು ೩೫ ಲಕ್ಷ ಟ್ರಾಫಿಕ್ ಕೇಸ್ ಗಳಲ್ಲಿ 102 ಕೋಟಿ ದಂಡವನ್ನ ಟ್ರಾಫಿಕ್ ಪೊಲೀಸರು ಕಲೆಕ್ಟ್ ಮಾಡಿದ್ದಾರೆ. 
 
ಹಾಗಾದ್ರೆ ಯಾವ್ಯಾವ ದಿನ ಎಷ್ಟೆಷ್ಟು ದಂಡ ವಸೂಲಾಗಿದೆ ಅಂತಾ ನೋಡೊದಾದ್ರೆ.
Gfx in.. 
3Feb - 2.24 ಲಕ್ಷ ಕೇಸ್, 7 ಕೋಟಿ ದಂಡ.
4Feb - 3 ಲಕ್ಷ ಕೇಸ್, 9 ಕೋಟಿ ದಂಡ.
5Feb - 2.87 ಲಕ್ಷ ಕೇಸ್, 7.49 ಕೋಟಿ ದಂಡ.
6Feb - 3.34 ಲಕ್ಷ ಕೇಸ್, 9.57 ಕೋಟಿ ದಂಡ.
7Feb - 3.45 ಲಕ್ಷ ಕೇಸ್, 9.70 ಕೋಟಿ ದಂಡ.
8Feb- 3.87 ಲಕ್ಷ ಕೇಸ್, 10 ಕೋಟಿ ದಂಡ.
9Feb- 5.51 ಲಕ್ಷ ಕೇಸ್, 14.64 ಕೋಟಿ ದಂಡ.
10Feb- 6.70 ಲಕ್ಷ ಕೇಸ್,17.61 ಕೋಟಿ ದಂಡ.
11Feb- 3.85 ಲಕ್ಷ ಕೇಸ್, 12.52 ಕೋಟಿ ದಂಡ (ಮಧ್ಯಾಹ್ನ ಮೂರು ಗಂಟೆ)

ಟ್ರಾಫಿಕ್ ಫೈನ್ ಕಟ್ಟಲು ಫೆಬ್ರವರಿ 3 ರಿಂದ ವಾಹನ ಸವಾರರಿಗೆ ರಿಯಾಯಿತಿ ನೀಡಲಾಗಿದೆ. ಕಳೆದ ಒಂಭತ್ತು ದಿನಗಳಲ್ಲಿ ಒಟ್ಟು 35.60 ಲಕ್ಷ ಕೇಸ್ ಗಳಲ್ಲಿ 102 ಕೋಟಿ ದಂಡವನ್ನ ಟ್ರಾಫಿಕ್ ಪೊಲೀಸರು ಸಂಗ್ರಹ ಮಾಡಿದ್ದಾರೆ. ಅಲ್ಲದೇ ಇಂದು ಕೊನೆ ದಿನವಾದ್ದರಿಂದ ದಂಡದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಹಮದಾಬಾದ್ ವಿಮಾನ ದುರಂತ: ಆರ್ ಎಸ್ಎಸ್, ಮುಸ್ಲಿಮರು ಮಾಡುತ್ತಿರುವ ಕೆಲಸ ನೋಡಿ

ಅಹಮದಾಬಾದ್ ವಿಮಾನ ದುರಂತ ಸ್ಥಳಕ್ಕೆ ಬರುತ್ತಿರುವ ಜನರಿಂದಲೇ ತನಿಖಾಧಿಕಾರಿಗಳಿಗೆ ತಲೆನೋವು

ನಮ್ಮವರ ಮೃತದೇಹ ಕೊಡಿ.. ಅಹಮದಾಬಾದ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಸಾಲು

ವಿಮಾನದ ಚಕ್ರಗಳು ಎಂಥಾ ಅಪಘಾತಕ್ಕೂ ಬೇಗ ಹಾನಿಯಾಗಲ್ಲ ಯಾಕೆ

Karnataka Weather: ಈ ವಾರದ ಹವಾಮಾನ ಬದಲಾವಣೆಯನ್ನು ತಪ್ಪದೇ ಗಮನಿಸಿ

ಮುಂದಿನ ಸುದ್ದಿ
Show comments