Webdunia - Bharat's app for daily news and videos

Install App

ಕೊರೊನಾ ಹೆಸರಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನರಿಂದ ಹಣ ಸುಲಿಗೆ

Webdunia
ಭಾನುವಾರ, 18 ಅಕ್ಟೋಬರ್ 2020 (10:50 IST)
ಮೈಸೂರು : ಕೊರೊನಾ ಹೆಸರಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಮಾಯಕ ಜನರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. 2 ಲಕ್ಷ ಹಣ ಕೊಡುವಂತೆ ಸೋಂಕಿತನ ಮಗಳಿಗೆ ದಿಗ್ಭಂಧನ ಮಾಡಿರುವುದಾಗಿ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪ ಮಾಡಲಾಗಿದೆ.

ಚಿಕಿತ್ಸೆ ಸಂದರ್ಭದಲ್ಲಿ 2 ಲಕ್ಷ ಕಟ್ಟಿಸಿಕೊಂಡಿದ್ದ ಆಸ್ಪತ್ರೆ, ಮತ್ತೊಮ್ಮೆ ಸೋಂಕಿತನಿಂದ 1.20ಲಕ್ಷ ಹಣ ಕಟ್ಟಿಸಿಕೊಂಡಿದೆ. ಆಮೇಲೆ ರೋಗಿ ಡಿಸ್ಚಾರ್ಜ್ ಗೆ ಮತ್ತೆ 2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದೆ. ಇದರಿಂದ ಹೆದರಿದ ರೋಗಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಈ ವೇಳೆ ಆಸ್ಪತ್ರೆಯ ಸಿಬ್ಬಂದಿ  ರೋಗಿಯ ಪುತ್ರಿಯನ್ನ ದಿಗ್ಭಂಧಿಸಿದ್ದಾರೆ . 2 ಲಕ್ಷ ಹಣ ಕೊಡುವಂತೆ ಸಿಬ್ಬಂದಿಯಿಂದ ದಿಗ್ಭಂಧನ ಮಾಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ರೈತ ಸಂಘಟನೆ ಆಸ್ಪತ್ರೆಗೆ ಮುತ್ತಿಗೆ  ಹಾಕಿ ವಸೂಲಿ ಮಾಡಿದ್ದ ಹಣದಲ್ಲಿ 25 ಸಾವಿರ ರೂ. ವಾಪಸ್ ಪಡೆದು ರೋಗಿಯ ಕುಟುಂಬಕ್ಕೆ ನೆರವಾಗಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments