Select Your Language

Notifications

webdunia
webdunia
webdunia
webdunia

ಕುಡಿಯುವ ನೀರಿಗಾಗಿ ಹಣ ಬಿಡುಗಡೆ ಆಗಿದೆ

ಕುಡಿಯುವ ನೀರಿಗಾಗಿ ಹಣ ಬಿಡುಗಡೆ ಆಗಿದೆ
bangalore , ಸೋಮವಾರ, 21 ಆಗಸ್ಟ್ 2023 (18:20 IST)
ತಮ್ಮ ಕ್ಷೇತ್ರಕ್ಕೆ 7.64 ಕೋಟಿ ಅನುದಾನ ಬಿಡುಗಡೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ S.T.ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರದಲ್ಲಿ ಸಮಸ್ಯೆ ಆಗಿತ್ತು. ಒಂದೇ ಒಂದು ಬೋರ್ವೆಲ್ ಕೊರೆಸಲು ಆಗಿರಲಿಲ್ಲ. ಧರಣಿ ಕೂರೋದಾಗಿ ಹೇಳಿದ್ದೆ. ಈ ಸಂಬಂಧ ಬಿಬಿಎಂಪಿ ಕಮೀಷನರ್ ಹಾಗೂ ರಾಕೇಶ್ ಸಿಂಗ್ ಅವರ ಜೊತೆಯೂ ಮಾತನಾಡಿದ್ದೆ. ಟ್ಯಾಂಕರ್​ಗಳಲ್ಲಿ ನೀರು ಕೊಡೋದಕ್ಕೂ ಸಮಸ್ಯೆ ಆಗಿತ್ತು. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್​ ಬಳಿಯೂ ಕೆಂಪೇಗೌಡ ಬಡಾವಣೆ ವೀಕ್ಷಣೆಗೆ ಬಂದಿದ್ದ ಸಮಯದಲ್ಲಿ ಮಾತನಾಡಿ, ವಾಸ್ತವ ಸ್ಥಿತಿ ಬಗ್ಗೆ ವಿವರಿಸಿದ್ದೆ. ಡೆವಲಪ್ಮೆಂಟ್ ಹಣ ಸ್ಟಾಪ್ ಮಾಡಿ, ಕುಡಿಯುವ ನೀರು ಸ್ಟಾಪ್ ಮಾಡಬೇಡಿ ಅಂತ ಹೇಳಿದ್ದೆ. ಆಗ ಅಧಿಕಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಹೇಳಿದ್ರು, ಆದ್ದರಿಂದ ಹಣ ಬಿಡುಗಡೆ ಆಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ನಮ್ಮ ತಾಯಿ.. ರಾಜಕೀಯ ಬೇಡ