Publish Date: Tue, 29 Jan 2019 (18:03 IST)
Updated Date: Tue, 29 Jan 2019 (18:05 IST)
ಸಕ್ಕರೆ ನಾಡಿಗೆ ಆಗಮಿಸಿದ ಮೋದಿ ರಥಕ್ಕೆ ಅದ್ಧೂರಿ ಸ್ವಾಗತ ಕೋರಲಾಯಿತು.
ಮಂಡ್ಯಕ್ಕೆ ಆಗಮಿಸಿದ ಮೋದಿ ರಥವನ್ನು ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಬೈಕ್ ರ್ಯಾಲಿ ಮೂಲಕ ಮೋದಿ ರಥ ಬರಮಾಡಿಕೊಂಡರು ಬಿಜೆಪಿ ಕಾರ್ಯಕರ್ತರು.
ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡುವ ಉದ್ದೇಶದಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ಮೋದಿ ರಥವು ಮಂಡ್ಯಕ್ಕೆ ಆಗಮಿಸಿದೆ.
ಮೋದಿ ಆಡಳಿತಾವಧಿಯಲ್ಲಿ ಬಂದ ಉತ್ತಮ ಯೋಜನೆಗಳ ಬಗ್ಗೆ ವಾಹನದಲ್ಲಿನ ಟಿವಿ ಸ್ಕ್ರೀನ್ ಮುಖಾಂತರ ವಿಡಿಯೋ ಪ್ರದರ್ಶನ ಮಾಡಲಾಗುತ್ತಿದೆ. ಮೋದಿ ಜಾರಿಗೆ ತಂದ ಅವರ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಈ ರಥ ಸಂಚರಿಸುತ್ತಿದೆ.