‘ನಾನು ಯಾರೂಂತ ತೋರಿಸ್ಲಾ ನಿಂಗೆ?’ ಮಲೆಮಹದೇಶ್ವರ ಬೆಟ್ಟದಲ್ಲಿ ಪಿಎಸ್ಐ ಮೇಲೆ ಎಂಎಲ್ ಸಿ ಗರಂ

Webdunia
ಶನಿವಾರ, 1 ಡಿಸೆಂಬರ್ 2018 (10:29 IST)
ಬೆಂಗಳೂರು: ನಿನ್ನೆ ಸಿಎಂ ಕುಮಾರಸ್ವಾಮಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಅಲ್ಲಿ ವಸತಿ ಸಮುಚ್ಚಯವೊಂದನ್ನು ಉದ್ಘಾಟಿಸುವ ಕಾರ್ಯಕ್ರಮವಿತ್ತು. ಈ ವೇಳೆ ಅಲ್ಲಿಗೆ ಬಂದಿದ್ದ ಎಂಎಲ್ ಸಿ ಮರಿತಿಬ್ಬೇಗೌಡ ಪಿಎಸ್ಐ ಒಬ್ಬರ ಮೇಲೆ ಆವಾಜ್ ಹಾಕಿದ ಘಟನೆ ನಡೆದಿದೆ.


ಸಿಎಂ ಕಾರ್ಯಕ್ರಮಕ್ಕೆ ಕೊಂಚ ತಡವಾಗಿ ಆಗಮಿಸಿದ ಎಂಎಲ್ ಸಿ ಮರಿತಿಬ್ಬೇಗೌಡರ ಕಾರನ್ನು ಭದ್ರತೆ ಹೊಣೆ ಹೊತ್ತಿದ್ದ ಪಿಎಸ್ಐ ಬಸವರಾಜು ನೇತೃತ್ವದ ತಂಡ ತಡೆಹಿಡಿಯಿತು. ಇದರಿಂದ ಕೆಂಡಾಮಂಡಲರಾದ ಶಾಸಕರು ನಾನು ಯಾರೂಂತ ಗೊತ್ತಿಲ್ವಾ ನಿಂಗೆ? ತೋರಿಸ್ಲಾ ನಾನು ಯಾರೂಂತ. ಎಸ್ ಪಿ, ಐಜಿ ಈಗಲೇ ಇಲ್ಲಿಗೆ ಬರಲಿ. ಈವತ್ತು ಇಲ್ಲಿ ಇತಿಹಾಸ ಆಗ್ಬೇಕು. ನಿನ್ನ ಸಸ್ಪೆಂಡ್ ಮಾಡಿಸ್ತೀನಿ ಎಂದು ಕೂಗಾಡಿದರು.

ಈ ವೇಳೆಗೆ ಅಲ್ಲಿಗೆ ಬಂದ ಸಚಿವ ಸಾ ರಾ ಮಹೇಶ್ ಮರಿತಿಬ್ಬೇಗೌಡರನ್ನು ಸಮಾಧಾನಿಸಿ ವೇದಿಕೆಗೆ ಕರೆದೊಯ್ಯಲು ಯತ್ನಿಸಿದರು. ಆಗಲೂ ಸಮಾಧಾನಗೊಳ್ಳದ ಶಾಸಕರು ಪಿಎಸ್ಐ ಅಮಾನತಿಗೆ ಪಟ್ಟು ಹಿಡಿದಿದ್ದರು.

ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ಎಂಎಲ್ ಸಿ ಮರಿತಿಬ್ಬೇಗೌಡ, ನಾನು ಎಂಎಲ್ ಸಿ, ಕಾರ್ಯಕ್ರಮಕ್ಕೆ ಹೋಗಬೇಕು ಎಂದು ಎಷ್ಟೇ ಹೇಳಿದರೂ ಆ ಅಧಿಕಾರಿ ಕೇಳಲಿಲ್ಲ. ಅರ್ಧಗಂಟೆ ಕಾಯಿಸಿದರು. ಅದಕ್ಕೆ ನಾನು ನಿಮ್ಮ ಮೇಲಧಿಕಾರಿಗಳ ನಂಬರ್ ಕೊಡಿ ಎಂದು ಕೇಳಿದೆ ಅಷ್ಟೇ. ಯಾರಿಗೂ ನಾನು ಆವಾಜ್ ಹಾಕಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಂಡ ಎಂದರೆ ಹೀಗಿರಬೇಕು.. ಆಗ ತಾನೇ ಹುಟ್ಟಿದ ಮಗುವನ್ನು ಬಿಟ್ಟು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ Video

ಇವರೆಂಥಾ ಹೆತ್ತವರು..ಯ:ಕಶ್ಚಿತ್ ಚರಂಡಿಗೆ ಬಿದ್ದ ತಟ್ಟೆಗಾಗಿ ಮಗುವಿನ ಜೀವವನ್ನೇ ಪಣಕ್ಕಿಟ್ಟರು Video

ಜಿರಳೆ ಪಾರ್ಟಿ ಪ್ರತಿಭಟನೆ ದಕ್ಷಿಣ ಭಾರತದಲ್ಲಿ ಯಾಕೆ ಪಾಪ್ಯುಲರ್ ಆಗಿಲ್ಲ: ಇಲ್ಲಿದೆ ಕಾರಣ

ಆನ್ ಲೈನ್ ಮೀಟಿಂಗ್ ನಲ್ಲಿ ಎಡವಟ್ಟು: ಸೀನಿಯರ್ ನ್ನೇ ಹೀಗೆ ಕರೆಯೋದಾ ಮಹಿಳೆ: ಸಖತ್ ಫನ್ನಿ video

ಕೋರ್ಟ್ ನಲ್ಲಿ ತೇಜಸ್ವಿ ಸೂರ್ಯ ಭರ್ಜರಿ ವಾದ: ಜಡ್ಜ್ ಏನು ಹೇಳಿದ್ರು ನೋಡಿ Video

ಮುಂದಿನ ಸುದ್ದಿ
Show comments