ಊಟಕ್ಕೂ ಬಿಡಲ್ಲ, ಶುಗರ್ ಪೇಷೆಂಟ್ ಗತಿಯೇನು: ಸ್ಪೀಕರ್ ಖಾದರ್ ವಿರುದ್ಧ ಅಸಮಾಧಾನ

Krishnaveni K
ಬುಧವಾರ, 18 ಡಿಸೆಂಬರ್ 2024 (16:38 IST)
ಬೆಳಗಾವಿ: ಊಟಕ್ಕೂ ಬಿಡಲ್ಲ, ಶುಗರ್ ಪೇಷೆಂಟ್ ಗಳಿದ್ದರೆ ಏನು ಗತಿ?.. ಹೀಗಂತ ಇಂದು ಸದನದಲ್ಲಿ ಸ್ಪೀಕರ್ ಯುಟಿ ಖಾದರ್ ವಿರುದ್ಧ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
 

ಸದನಕ್ಕೆ ಯಾರೇ ತಡವಾಗಿ ಬಂದರೂ ಅಥವಾ ಗೈರಾದರೂ ಇಲ್ಲವೇ ಬಂದೂ ಅತ್ತಿತ್ತ ಓಡಾಡುತ್ತಿದ್ದರೆ ಸ್ಪೀಕರ್ ಯುಟಿ ಖಾದರ್ ಹೆಡ್ ಮಾಸ್ಟ್ರ ರೀತಿಯಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇಂದು ಊಟಕ್ಕೆ ಬಿಡ್ತಿಲ್ಲ ಎಂದು ಕೆಲವು ಶಾಸಕರು ಅಸಮಾಧಾನ ಹೊರಹಾಕಿದರು.

ಶಿವಲಿಂಗೇ ಗೌಡ ಮಾತನಾಡಲು ಎದ್ದು ನಿಂತಾಗ ಕೆಲವು ಶಾಸಕರು ಊಟ ಮಾಡಕ್ಕಾದರೂ ಅವಕಾಶ ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಯುಟಿ ಖಾದರ್ ಒಂದು ನಿಮಿಷ ಕೂತ್ಕೊಳ್ಳಿ. ಅವರು ಮಾತನಾಡಿ ಆಗಲಿ ಎಂದಿದ್ದಾರೆ. ಇದಕ್ಕೆ ಶಾಸಕರೊಬ್ಬರು ಮಾನ್ಯ ಅಧ್ಯಕ್ಷರೇ ಒಂದು ಅರ್ಧ ಗಂಟೆ ಊಟಕ್ಕಾದರೂ ಬಿಡಿ, ಶುಗರ್ ಪೇಷೆಂಟ್ ಇದ್ರೆ ಏನು ಗತಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪೀಕರ್ ಆಗ ಅರ್ಧಗಂಟೆ ಇತ್ತಲ್ವಾ? ನೀವು ಊಟ ಮಾಡಿಕೊಂಡೇ ಬಂದಿದ್ದಲ್ವಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಶಾಸಕರು, ಮೀಡಿಯಾದವರು ಕರೆದರು ಎಂದು ಮಾತನಾಡಲು ಹೊಗಿದ್ದೆವು. ಈಗ ಊಟಕ್ಕೆ ಹೋಗಲು ಅವಕಾಶ ಕೊಡಿ ಎಂದು ಕೇಳಿದ್ದಾರೆ. ಕೊನೆಗೆ ಸ್ಪೀಕರ್ ಖಾದರ್ ನೀವು ಹೋಗಿ ಬನ್ನಿ, ಊಟ ಮಾಡಿ ಎಂದು ಕಳುಹಿಸಿಕೊಟ್ಟರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಶಿವಕುಮಾರ್‌ ಊಟ, ತಿಂಡಿ ಮಾಡಿಕೊಂಡೇ ಎರಡೂವರೆ ವರ್ಷ ಕಳೆದ್ರು: ಶ್ರೀರಾಮುಲು ವ್ಯಂಗ್ಯ

ಬಾಲಕಿಗೆ ಲೈಂಗಿಕ ಕಿರುಕುಳ ಕೇಸ್: ಬಿಎಸ್ ಯಡಿಯೂರಪ್ಪ ಕೇಸ್ ಗೆ ಮಹತ್ವದ ಆದೇಶ ಕೊಟ್ಟ ಸುಪ್ರೀಂಕೋರ್ಟ್

ಬ್ರೇಕ್ ಫಾಸ್ಟ್ ಮುಗಿಸಿ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಮುಂದಿನ ಸುದ್ದಿ
Show comments