Select Your Language

Notifications

webdunia
webdunia
webdunia
webdunia

ಪೌರ ಕಾರ್ಮಿಕರಿಗೆ ಪೊರಕೆ ಹಿಡಿದು ಸಾಥ್ ನೀಡಿದ ಶಾಸಕ

ಪೌರ ಕಾರ್ಮಿಕರಿಗೆ ಪೊರಕೆ ಹಿಡಿದು ಸಾಥ್ ನೀಡಿದ ಶಾಸಕ
ಮೈಸೂರು , ಶನಿವಾರ, 6 ಅಕ್ಟೋಬರ್ 2018 (14:45 IST)
ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಪೌರ ಕಾರ್ಮಿಕರೊಂದಿಗೆ ಶಾಸಕರೊಬ್ಬರು ಪೊರಕೆಹಿಡಿದು ಸ್ವಚ್ಛತಾ ಕಾರ್ಯ ನಡೆಸಿ ಪ್ರತಿಭಟನೆ ನಡೆಸಿದರು.

ಮೈಸೂರು ಮಹಾನಗರ ಪಾಲಿಕೆಯ ಕಾರ್ಮಿಕರ ಪ್ರತಿಭಟನೆಗೆ ಶಾಸಕ ಸಾಥ್ ನೀಡಿದ್ದಾರೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಲ್ಕನೇ ದಿನಕ್ಕೆ ಪೌರ ಕಾರ್ಮಿಕರ ಪ್ರತಿಭಟನೆ ನಡೆಯುತ್ತಿದೆ.

ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಪೌರಕಾರ್ಮಿಕರಿಗೆ ಸಾಥ್ ನೀಡಿದ ಶಾಸಕ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ಮಾಡಿದರು. ಶಾಸಕ ಎಲ್. ನಾಗೇಂದ್ರ ಮೈಸೂರಿನ  ಚಾಮರಾಜ ಕ್ಷೇತ್ರದ ಶಾಸಕರಾಗಿದ್ದಾರೆ.

ಮೈಸೂರಿನ ಕೆಆರ್ ಸರ್ಕಲ್ ನಲ್ಲಿ ಸ್ವಚ್ಛತಾ ಕಾರ್ಯ  ನಡೆಸಿದರು. ಪಾಲಿಕೆ ಸದಸ್ಯರು, ಕಾರ್ಯಕರ್ತರು ಹಾಗೂ ಸಾರ್ವಜನಿಕರೂಂದಿಗೆ ಸ್ವಚ್ಛತಾ ಕಾರ್ಯ ಮಾಡಿದರು. ಕೂಡಲೇ ಪೌರಕಾರ್ಮಿಕರ ಬೇಡಿಕೆ ಈಡೇರಿಸಿ ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಶಾಸಕ ಎಲ್. ನಾಗೇಂದ್ರ ಆಗ್ರಹ ಮಾಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಬಳಕೆದಾರರ ಕೆಲಸ ಸುಲಭ ಮಾಡಿದೆ ಇನ್ಸ್ಟ್ರಾಗ್ರಾಮ್. ಹೇಗೆ ಗೊತ್ತಾ?