Select Your Language

Notifications

webdunia
webdunia
webdunia
Friday, 11 April 2025
webdunia

ಶ್ರೀರಾಮುಲು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂದ ಮಾಜಿ ಶಾಸಕ

ಜನಾರ್ಧನ ರೆಡ್ಡಿ
ಚಿತ್ರದುರ್ಗ , ಗುರುವಾರ, 8 ನವೆಂಬರ್ 2018 (15:54 IST)
ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನಾಯಕ ಜನಾಂಗಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ತನಗೆ ಬಿಜೆಪಿ ಟಿಕೆಟ್  ತಪ್ಪಿಸಿದ್ದು  ಜನಾರ್ಧನ ರೆಡ್ಡಿ ಎಂದು ದೂರಿರುವ ಮಾಜಿ ಶಾಸಕ ತಿಪ್ಪೇಸ್ವಾಮಿ, ಶ್ರೀರಾಮುಲು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನಾಯಕ ಜನಾಂಗಕ್ಕೆ ಮೋಸ ಮಾಡ್ತಾ ಇದಾರೆ.

ಜಗತ್ತಿಗೆ ಗೊತ್ತಿರುವ ವಿಷಯ ಮೊಳಕಾಲ್ಮೂರಲ್ಲಿ ಕುಳಿತು ಜನಾರ್ಧನ ರೆಡ್ಡಿ,  ಬಳ್ಳಾರಿ, ಮೊಳಕಾಲ್ಮೂರು ಚುನಾವಣೆ  ನಡೆಸಿದ್ದಾರೆ. ಬಿಜೆಪಿಗೆ ರೆಡ್ಡಿಗೆ ಸಂಬಧ ಇಲ್ಲ ಎಂದು ರೆಡ್ಡಿ ಹೇಳಿಕೆಗೆ ಮಾಜಿ ಶಾಸಕ ತಿಪ್ಪೇಸ್ವಾಮಿ ತಿರುಗೇಟು ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸಹೋದರನ ವಿರುದ್ಧ ಕೇಸ್: ರಾಜಕೀಯ ಪ್ರೇರಿತ ಆರೋಪ