Select Your Language

Notifications

webdunia
webdunia
webdunia
webdunia

ನಂಜನಗೂಡು ಉಪಚುನಾವಣೆಗೆ ಮಹದೇವಪ್ಪರಿಂದ ಹಣದ ಹೊಳೆ: ಸಾ.ರಾ.ಮಹೇಶ್

ನಂಜನಗೂಡು ಉಪಚುನಾವಣೆಗೆ ಮಹದೇವಪ್ಪರಿಂದ ಹಣದ ಹೊಳೆ:  ಸಾ.ರಾ.ಮಹೇಶ್
ಮೈಸೂರು , ಶನಿವಾರ, 21 ಜನವರಿ 2017 (12:56 IST)
ನಂಜನಗೂಡು ಉಪಚುನಾವಣೆಗೆ ಲೋಕೋಪಯೋಗಿ ಸಚಿವ ಎಚ್‌.ಸಿ.ಮಹದೇವಪ್ಪ ಹಣದ ಹೊಳೆಯೇ ಹರಿಸುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎಚ್‌.ಸಿ.ಮಹದೇವಪ್ಪ ಮೈಸೂರು ಜಿಲ್ಲಾ ಉಸ್ತವಾರಿ ಸಚಿವರಲ್ಲ. ಅವರು ನಂಜನಗೂಡು ಕ್ಷೇತ್ರದ ಉಸ್ತುವಾರಿ ಸಚಿವರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
 
ಎಪಿಎಂಸಿ ಚುನಾವಣೆಯಲ್ಲಿಯೂ ಸಹ ಸಚಿವ ಮಹದೇವಪ್ಪ ಹಣದ ಹೊಳೆ ಹರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿಯಾಗಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ. 
 
ನಂಜನಗೂಡು ಉಪಚುನಾವಣೆಯಲ್ಲಿ ಸಚಿವ ಎಚ್‌.ಸಿ.ಮಹದೇವಪ್ಪ ಅಥವಾ ಅವರ ಕುಟುಂಬ ವರ್ಗದವರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್‌ವೈ ವಿರುದ್ಧ ಶಾಸಕರು ಪತ್ರ ಬರೆದಿರುವುದು ನಿಜ ಎಂದ ಈಶ್ವರಪ್ಪ