Select Your Language

Notifications

webdunia
webdunia
webdunia
webdunia

ಇಸ್ಕಾನ್`ಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ನೀಡಲ್ಲ: ಯು.ಟಿ. ಖಾದರ್

ಇಸ್ಕಾನ್`ಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ನೀಡಲ್ಲ: ಯು.ಟಿ. ಖಾದರ್
ಬೆಂಗಳೂರು , ಗುರುವಾರ, 30 ಮಾರ್ಚ್ 2017 (14:24 IST)
ಇಂದಿರಾ ಕ್ಯಾಂಟೀನ್ ಊಟದ ಟೆಂಡರ್ ಇಸ್ಕಾನ್`ಗೆ ನೀಡುತ್ತಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರೆ ಹೇಳಿದ್ದಾರೆ. ಇಸ್ಕಾನ್`ಗೆ ಗುತ್ತಿಗೆ ನೀಡಲು ಶಾಸಕರು ವಿರೋಧಿಸಿದ್ದಾರೆ. ಇಸ್ಕಾನ್`ನವರು ಊಟದಲ್ಲಿ ಈರುಳ್ಳಿ, ಬೆಳ್ಳಳ್ಳಿ ಬಳಸುವುದಿಲ್ಲ, 3 ಗಂಟೆ ಮೊದಲೇ ತಯಾರಿಸುತ್ತಾರೆ. ಹೀಗಾಗಿ, ಗುತ್ತಿಗೆ ನೀಡಲು ವಿರೋಧವಿದೆ.

ಹೀಗಾಗಿ, ಕೇಂದ್ರೀಕೃತ ಅಡುಗೆಮನೆ ಬದಲು ಕ್ಷೇತ್ರಕ್ಕೊಂದು ಅಡುಗೆಮನೆ ತೆರೆಯಲು ಉದ್ದೇಶಿಸಿದ್ದೇವೆ. ಈ ಬಗ್ಗೆ ಹೋಟೆಲ್ ಮಾಲೀಕರ ಜೊತೆ ಮಾತುಕತೆ ನಡೆಸಿದ್ದು, ಟೆಂಡರ್ ಕರೆಯಲಾಗುವುದೆಂದು ಖಾದರ್ ಹೇಳಿದ್ದಾರೆ.

ಮಧ್ಯಾಹ್ನದ ಬಿಸಿಯೂಟ ಸರಬರಾಜು ಮಾಡುತ್ತಿರುವ ಇಸ್ಕಾನ್, ಉತ್ತಮ ಗುಣಮಟ್ಟ ಕಾಯ್ದುಕೊಂಡಿದ್ದು, ಮಧ್ಯಾಹ್ನದ ಬಿಸಿಯೂಟದ ಗುತ್ತಿಗೆ ಸಹ ನೀಡಲು ಸರ್ಕಾರ ಚಿಂತನೆ ನಡೆಸಿತ್ತು.

 

Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋಗೆ ಶಾಕ್.. 200 ರೂಪಾಯಿಗೆ ವರ್ಷಪೂರ್ತಿ 4ಜಿ ಡೇಟಾ ಆಫರ್