Select Your Language

Notifications

webdunia
webdunia
webdunia
webdunia

ಶಾಸಕರಿಗೆ ಮಾನಮರ್ಯಾದೆ ಇಲ್ಲ: ವಾಟಾಳ್ ನಾಗರಾಜ್

ಶಾಸಕರಿಗೆ ಮಾನಮರ್ಯಾದೆ ಇಲ್ಲ: ವಾಟಾಳ್ ನಾಗರಾಜ್
ಬೆಂಗಳೂರು , ಸೋಮವಾರ, 6 ಫೆಬ್ರವರಿ 2017 (16:15 IST)
ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ಷೋಪ ವ್ಯಕ್ತಪಡಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ. ಆದರೆ, ಈ ಕುರಿತು ಯಾವೊಬ್ಬ ಶಾಸಕನು ಚಕಾರ ಎತ್ತಿಲ್ಲ. ಈ ಶಾಸಕರಿಗೆ ಮಾನಮರ್ಯಾದೆ ಇಲ್ಲ. ಇದು ರಾಜ್ಯಕ್ಕೆ ಮಾಡಿರುವ ಅಪಮಾನ ಎಂದು ಕಿಡಿಕಾರಿದರು.
 
ಈ ಕುರಿತು ನಿನ್ನೆಯಷ್ಟೇ ಶಾಸಕರಿಗೆ ಸೂಚನೆ ನೀಡಿದ್ದೆ. ಒಂದು ವೇಳೆ, ನಾನು ವಿಧಾನಸೌಧದಲ್ಲಿ ಇರುತ್ತಿದ್ದರೆ ರಾಜ್ಯಪಾಲರಿಗೆ ಹಿಂದೆ ಭಾಷೆಯಲ್ಲಿ ಭಾಷಣ ಮಾಡಲು ಬಿಡುತ್ತಿರಲಿಲ್ಲ ಎಂದರು.
 
ಇಂದು ವಿಧಾನಮಂಡಲದ ಜಂಟಿ ಅಧಿವೇಶನ ಪ್ರಾರಂಭವಾಗಿದ್ದು, ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಹಿಂದೆ ಭಾಷೆಯಲ್ಲಿ ಭಾಷಣ ಮಾಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಪಾಲರ ಭಾಷಣಕ್ಕೆ ಜಗದೀಶ್ ಶೆಟ್ಟರ್ ಆಕ್ರೋಶ