Select Your Language

Notifications

webdunia
webdunia
webdunia
webdunia

ಶಾಸಕ ನರೇಂದ್ರ ಸ್ವಾಮಿ ಕ್ಷಮೆ ಕೇಳಬೇಕು

ಶಾಸಕ ನರೇಂದ್ರ ಸ್ವಾಮಿ ಕ್ಷಮೆ ಕೇಳಬೇಕು
bangalore , ಶನಿವಾರ, 8 ಜುಲೈ 2023 (18:30 IST)
ಸದನದಲ್ಲಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಯನ್ನು ಏಕವಚನದಲ್ಲಿ ಶಾಸಕ ನರೇಂದ್ರ ಸ್ವಾಮಿ ನಿಂದಿಸಿದ್ದಾರೆ. ಹೀಗಾಗಿ ಶಾಸಕ ನರೇಂದ್ರ ಸ್ವಾಮಿ, ಕ್ಷಮೆಯಾಚನೆ ಮಾಡಬೇಕು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆಗ್ರಹಿಸಿದ್ದಾರೆ.. ಮಂಡ್ಯದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರೋದು ಸರಿಯಲ್ಲ. ಈ ದುರಾಂಕಾರದ ನಡತೆಯನ್ನ ಮಳವಳ್ಳಿ ಶಾಸಕರು ಬಿಡಬೇಕು.. ಈ ಕೂಡಲೇ ಕುಮಾರಣ್ಣ ಅವರನ್ನ ಕ್ಷಮೆ ಕೋರಬೇಕು.. ಸಿಎಂ ಆಗಿ ರಾಜ್ಯದ ಬಡವರ ಪರ ಕೆಲಸ ಮಾಡಿದಂತಹ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಖಂಡನೀಯ.. ಈ ದುರ್ನಡನೆ ದುರಾಂಕಾರದ ನಡವಳಿಕೆಯನ್ನ ನೀವು ತಿದ್ದಿಕೊಳ್ಳಿ. ಅವರ ಪರ ಕಾರ್ಯಕರ್ತರು ಇನ್ನೂ ಬದುಕಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಏನು ಅನ್ನೋದನ್ನ ತೋರಿಸಬೇಕಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಕೂಡಲೇ ನರೇಂದ್ರ ಸ್ವಾಮಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ವೃದ್ಧನಿಗೆ ಸೈಬರ್​ ಕಳ್ಳರ ಮಹಾ ದೋಖಾ