ಹಣದ ಆಸೆಗಾಗಿ ಬಾಲಕಿಯನ್ನು ಅಪಹರಿಸಲು ಪ್ರಯತ್ನಿಸಿದ ಘಟನೆ ಮೈಸೂರಿನಲ್ಲಿ ವಿಫಲವಾಗಿದೆ. ಬೆಂಗಳೂರಿನಿಂದ ಬಂದಿದ್ದ ಬಾಲಕಿ ಸಿದ್ಧಾರ್ಥನಗರದ ತಮ್ಮ ಸಂಬಂಧಿಕರ ಮನೆಯ ಮುಂದೆ ಆಟವಾಡುತ್ತಿದ್ದಾಗ ಬೈಕಿನಿಂದ ಮೂವರು ಬಾಲಕಿಯನ್ನು ಅಪಹರಿಸಿದ ಕರೆದೊಯ್ದರು.
ಆಗ ಬಾಲಕಿಯ ಪೋಷಕರು ಸಿನೀಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಅಪಹರಣಕಾರರನ್ನು ಬೈಕಿನಲ್ಲಿ ಬೆನ್ನತ್ತಿ ಅವರ ಬೈಕಿಗೆ ತಮ್ಮ ಬೈಕ್ ಡಿಕ್ಕಿಹೊಡಿಸಿದರು. ಈ ಸಂದರ್ಭದಲ್ಲಿ ಇಬ್ಬರು ತಪ್ಪಿಸಿಕೊಂಡು ಒಬ್ಬ ಸಿಕ್ಕಿಬಿದ್ದಿದ್ದಾನೆ. ಅಪಹರಿಸಿದವರು ಅಪ್ರಾಪ್ತ ವಯಸ್ಕ ಬಾಲಕರೆಂದು ಹೇಳಲಾಗಿದೆ.
ಬಾಲಕಿಯನ್ನು ಅಪಹರಿಸಿ ಬಾಲಕಿಯ ತಂದೆಗೆ ಒತ್ತೆಹಣಕ್ಕಾಗಿ ಬೇಡಿಕೆ ಸಲ್ಲಿಸಲು ಅಪಹರಣಕಾರರು ನಿರ್ಧರಿಸಿದ್ದರು. ಆದರೆ ಪೋಷಕರ ಸಮಯಪ್ರಜ್ಞೆಯಿಂದ ಅಪಹರಣ ಯತ್ನ ಸುಖಾಂತ್ಯ ಕಂಡಿದೆ. ಬಾಲಕಿಯನ್ನು ಕ್ಷೇಮವಾಗಿ ರಕ್ಷಿಸಲಾಗಿದ್ದು, ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ