Select Your Language

Notifications

webdunia
webdunia
webdunia
webdunia

ಕ್ವಾರಂಟೈನ್ ಬಗ್ಗೆ ಸಚಿವ ಹೀಗಾ ಹೇಳೋದು

ಕ್ವಾರಂಟೈನ್ ಬಗ್ಗೆ ಸಚಿವ ಹೀಗಾ ಹೇಳೋದು
ತುಮಕೂರು , ಸೋಮವಾರ, 6 ಜುಲೈ 2020 (18:03 IST)
ಕ್ವಾರಂಟೈನ್ ಗೆ ಒಳಗಾಗುವವರು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ ಎಂದು ಸಚಿವರೊಬ್ಬರು ಹೇಳಿದ್ದಾರೆ.

ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಕೊರೊನಾ ಲಕ್ಷಣ ಕಾಣಿಸಿಕೊಂಡ ತಕ್ಷಣ ಸಾರ್ವಜನಿಕರು ರೋಗ ತಪಾಸಣೆ ಮಾಡಿಕೊಳ್ಳುವುದರ ಮೂಲಕ ಕೊರೋನಾ ನಿಗ್ರಹಿಸಬಹುದಾಗಿದ್ದು, ಸ್ವಯಂ ಔಷಧಿ ಮಾಡಿಕೊಳ್ಳದೆ ತಪಾಸಣೆಗೆ ಒಳಗಾಗಬೇಕು ಎಂದರು.

ಕ್ವಾರಂಟೈನ್ ಗೆ ಒಳಗಾಗುವವರು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ, ಹೊರಗಿನಿಂದ ಬರುವವರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಹಾಗೂ ತಪಾಸಣೆ ಮಾಡದೇ ಯಾರನ್ನು ಮನೆಯಲ್ಲಿಟ್ಟು ಕೊಳ್ಳಬಾರದು, ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಅವಶ್ಯಕ ಸಹಕಾರ ಜನರು ನೀಡಬೇಕು ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ದಿನವೇ ಹಳೇ ಪ್ರಿಯಕರನಿಂದ ಕೊಲೆಯಾದ ವಧು