Select Your Language

Notifications

webdunia
webdunia
webdunia
webdunia

ಏಕವಚನದಲ್ಲಿ ಮಾತನಾಡಿದರೆ ಸುಮ್ಮನೆ ಇರಲ್ಲ: ಬಿಎಸ್`ವೈಗೆ ಎಂ.ಬಿ. ಪಾಟೀಲ್ ಎಚ್ಚರಿಕೆ

ಏಕವಚನದಲ್ಲಿ ಮಾತನಾಡಿದರೆ ಸುಮ್ಮನೆ ಇರಲ್ಲ: ಬಿಎಸ್`ವೈಗೆ ಎಂ.ಬಿ. ಪಾಟೀಲ್ ಎಚ್ಚರಿಕೆ
ವಿಜಯಪುರ , ಶನಿವಾರ, 1 ಜುಲೈ 2017 (10:06 IST)
ಏಕವಚನದಲ್ಲಿ ಮಾತನಾಡಿದರೆ ಸುಮ್ಮನೆ ಇರಲ್ಲ: ಬಿಎಸ್`ವೈಗೆ ಎಂ.ಬಿ. ಪಾಟೀಲ್ ಎಚ್ಚರಿಕೆ
ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದರೆ ಸರಿ ಇರಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.


ವಿಜಯಪುರದಲ್ಲಿ ಮಾತನಾಡಿದ ಎಂ.ಬಿ. ಪಾಟೀಲ್, ಒಂದು ಬಾರಿ ಏಕವಚನದಲ್ಲಿ ಮಾತನಾಡಿದ್ದಾಗ ಸುಮ್ಮನಿದ್ದೆ, ಎರಡನೇ ಬಾರಿಯೂ ಏಕವಚನದಲ್ಲಿ ಮಾತನಾಡಿದ್ದೀರಿ ಇನ್ಮುಂದೆ ಏಕವಚನದಲ್ಲಿ ಮಾತನಾಡಿದರೆ ಸರಿ ಇರಲ್ಲ. ವೈಯಕ್ತಿಕವಾಗಿ ಹೋದರೆ ನಿಮ್ಮ ಬಗ್ಗೆ ನನ್ನ ಬಳಿಯೂ ದಾಖಲೆಗಳಿವೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಬಂಡವಾಳ ಬಯಲು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ವಿಜಯಪುರದಲ್ಲಿ ಮಾತನಾಡಿದ್ದ ಯಡಿಯೂರಪ್ಪ, ಎಂ.ಬಿ. ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ನೀರಾವರಿ ಯೋಜನೆಗಳನ್ನ ಪೂರ್ಣಗೊಳಿಸುವ ಬದಲು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಿಎಸ್ ಟಿ ಇಫೆಕ್ಟ್: ಯಾವುದು ಅಗ್ಗ? ಯಾವುದು ದುಬಾರಿ?