Select Your Language

Notifications

webdunia
webdunia
webdunia
webdunia

13 ಸಾವಿರ ಕೋಟಿ ಸಾಲ ಕೊಡ್ತೇನೆ ಎಂದ ಸಚಿವ

13 ಸಾವಿರ ಕೋಟಿ ಸಾಲ ಕೊಡ್ತೇನೆ ಎಂದ ಸಚಿವ
ರಾಮನಗರ , ಭಾನುವಾರ, 19 ಏಪ್ರಿಲ್ 2020 (15:56 IST)
ಯಾವುದೇ ತೊಂದರೆಯಾಗದಂತೆ 13 ಸಾವಿರ ಕೋಟಿ ರೂಪಾಯಿ ಸಾಲ ಕೊಡೋದಾಗಿ ಸಚಿವರೊಬ್ಬರು ಹೇಳಿದ್ದಾರೆ.

ರೈತರಿಗೆ ಯಾವುದೇ ತೊಂದರೆ ಆಗದಂತೆ ಈ ಬಾರಿಯೂ ಸಹಕಾರ ಸಂಘಗಳ ಮೂಲಕ 13,000 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.

ರಾಮನಗರ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ರೈತರು ಮತ್ತು ತರಕಾರಿ ಮಾರಾಟಗಾರರ ಸಮಸ್ಯೆಗಳನ್ನು ಆಲಿಸಿದರು. ಕಳೆದ ಸಲದಂತೆ ಈ ಬಾರಿಯೂ 13 ಸಾವಿರ ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.  

ರಾಮನಗರ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಒಂದು ಕೊರೊನಾ ಸೋಂಕು ಕೇಸ್  ದಾಖಲಾಗಿಲ್ಲ ಇದು ಸಂತೋಷಕರ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಇದುವರೆಗೆ ಅನುಸರಿಸಿರುವ  ಸೂಕ್ತ ಕ್ರಮಗಳನ್ನು ಮುಂದುವರಿಸಬೇಕು ಎಂದರು.  



Share this Story:

Follow Webdunia kannada

ಮುಂದಿನ ಸುದ್ದಿ

ಸುಳ್ಳು ಹೇಳಿ ಪಾಸ್ ಪಡೆದ ಮಹಿಳೆ : 6 ಮಂದಿ ವಿರುದ್ಧ ಎಫ್ ಐ ಆರ್