Publish Date: Fri, 19 Jun 2020 (15:39 IST)
Updated Date: Fri, 19 Jun 2020 (15:42 IST)
ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರಿಗೆ ಅನ್ಯಾಯವಾಗಲು ನಾವು ಬಿಡಲ್ಲ.
ಹೀಗಂತ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಹೇಳಿದ್ದಾರೆ.
ಈ ರಾಜ್ಯದಲ್ಲಿ ಬಿಜೆಪಿ ಸರಕಾರಕ್ಕೆ ಭದ್ರ ಬುನಾದಿ ಹಾಕಿದ್ದ ಸಚಿವ ಆನಂದ್ ಸಿಂಗ್ ಹಾಗೂ ನಮ್ಮಜೊತೆ ಇದ್ದವರಲ್ಲಿ 10 ಜನ ಸಚಿವರಾಗಿದ್ದೇವೆ. ಇಬ್ಬರು ವಿಧಾನ ಪರಿಷತ್ ಸದಸ್ಯರಾಗುತ್ತಿದ್ದಾರೆ.
ಇಬ್ಬರ ಕ್ಷೇತ್ರದಲ್ಲಿ ಇನ್ನೂ ಚುನಾವಣೆ ನಡೆಯಬೇಕಿದೆ. ಇದರಲ್ಲಿ ವಿಶ್ವಬಾಥ್ ಅವರಿಗೆ ಎಂ.ಎಲ್.ಸಿ ಟಿಕೆಟ್ ತಪ್ಪಿದೆ. ಹೈಕಮಾಂಡ ನಿರ್ಧಾರ ಅದು. ಅವರಿಗೆ ಮುಂದಿನ ದಿನದಲ್ಲಿ ಸೂಕ್ತ ಸ್ಥಾನ ಮಾನ ದೊರೆಯಲಿದೆ.
ಅನ್ಯಾಯ ಆಗಲು ಬಿಡಲ್ಲ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದು, ನಾವೆಲ್ಲ ವಿಶ್ವನಾಥ್ ಜೊತೆ ಇರುವುದಾಗಿ ಹೇಳಿದ್ದಾರೆ ಎಂದರು.