Select Your Language

Notifications

webdunia
webdunia
webdunia
webdunia

ಹೆಚ್.ವಿಶ್ವನಾಥ್ ಗೆ ಅನ್ಯಾಯ ಆಗೋದಿಕ್ಕೆ ಬಿಡೋಲ್ಲ ಎಂದ ಸಚಿವ

ಹೆಚ್.ವಿಶ್ವನಾಥ್ ಗೆ ಅನ್ಯಾಯ ಆಗೋದಿಕ್ಕೆ ಬಿಡೋಲ್ಲ ಎಂದ ಸಚಿವ
ಬಳ್ಳಾರಿ , ಶುಕ್ರವಾರ, 19 ಜೂನ್ 2020 (15:39 IST)
ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರಿಗೆ ಅನ್ಯಾಯವಾಗಲು ನಾವು ಬಿಡಲ್ಲ.

ಹೀಗಂತ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಹೇಳಿದ್ದಾರೆ.

ಈ ರಾಜ್ಯದಲ್ಲಿ ಬಿಜೆಪಿ ಸರಕಾರಕ್ಕೆ ಭದ್ರ ಬುನಾದಿ‌ ಹಾಕಿದ್ದ ಸಚಿವ ಆನಂದ್ ಸಿಂಗ್ ಹಾಗೂ ನಮ್ಮ‌ಜೊತೆ ಇದ್ದವರಲ್ಲಿ 10 ಜನ‌ ಸಚಿವರಾಗಿದ್ದೇವೆ.  ಇಬ್ಬರು ವಿಧಾನ ಪರಿಷತ್ ಸದಸ್ಯರಾಗುತ್ತಿದ್ದಾರೆ.

ಇಬ್ಬರ ಕ್ಷೇತ್ರದಲ್ಲಿ ಇನ್ನೂ ಚುನಾವಣೆ ನಡೆಯಬೇಕಿದೆ. ಇದರಲ್ಲಿ ವಿಶ್ವಬಾಥ್ ಅವರಿಗೆ ಎಂ.ಎಲ್.ಸಿ  ಟಿಕೆಟ್ ‌ತಪ್ಪಿದೆ. ಹೈಕಮಾಂಡ‌ ನಿರ್ಧಾರ ಅದು. ಅವರಿಗೆ ಮುಂದಿನ ದಿನದಲ್ಲಿ‌ ಸೂಕ್ತ ಸ್ಥಾನ ಮಾನ ದೊರೆಯಲಿದೆ.

ಅನ್ಯಾಯ ಆಗಲು ‌ಬಿಡಲ್ಲ. ಈ ಕುರಿತು ಮುಖ್ಯಮಂತ್ರಿಗಳ ‌ಜೊತೆ ಮಾತನಾಡಿದ್ದು,  ನಾವೆಲ್ಲ ವಿಶ್ವನಾಥ್ ಜೊತೆ ಇರುವುದಾಗಿ ಹೇಳಿದ್ದಾರೆ ಎಂದರು.  



Share this Story:

Follow Webdunia kannada

ಮುಂದಿನ ಸುದ್ದಿ

ಸತತವಾಗಿ 13ನೇ ದಿನವೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ