Select Your Language

Notifications

webdunia
webdunia
webdunia
webdunia

ಜೆಡಿಎಸ್ ಶಾಸಕನ ಸಹೋದರನಿಗೆ ಸಚಿವ ಎ.ಮಂಜು ಬೆದರಿಕೆ ಆರೋಪ

ಜೆಡಿಎಸ್ ಶಾಸಕನ ಸಹೋದರನಿಗೆ ಸಚಿವ ಎ.ಮಂಜು ಬೆದರಿಕೆ ಆರೋಪ
ಮಂಡ್ಯ , ಗುರುವಾರ, 13 ಅಕ್ಟೋಬರ್ 2016 (16:22 IST)
ಪಶುಸಂಗೋಪನಾ ಸಚಿವ ಎ.ಮಂಜು ಅವರ ಬೆದರಿಕೆಗೆ ಹೆದರಿ ನನ್ನ ಸಹೋದರ ವಿಆರ್‌ಎಸ್ ತೆಗೆದುಕೊಂಡಿದ್ದಾನೆ ಎಂದು ಹಾಸನ ಜೆಡಿಎಸ್ ಶಾಸಕ ಎಚ್.ಎಸ್.ಪ್ರಕಾಶ್ ಗಂಭೀರವಾಗಿ ಆರೋಪಿಸಿದ್ದಾರೆ. 
 
ಪಶುಸಂಗೋಪನಾ ಸಚಿವ ಎ.ಮಂಜು ಅವರು ನನ್ನ ಸಹೋದರ ಡಾ.ಮೋಹನ ದಾಸ್‌ಗೆ ನೀನು ಭ್ರಷ್ಟಾಚಾರ ಮಾಡಿದ್ದೀಯಾ ಎಂದು ಬೆದರಿಕೆ ಒಡ್ಡಿದ್ದರು. ಇದರಿಂದ ಮನನೊಂದು ಆತ ಪಶುಸಂಗೋಪನಾ ಇಲಾಖೆಯ ಎಡಿ ಹುದ್ದೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾನೆ ಎಂದು ಶಾಸಕ ಎಚ್.ಎಸ್.ಪ್ರಕಾಶ್ ದೂರಿದರು.
 
ಪಶುಸಂಗೋಪನಾ ಇಲಾಖೆಯಲ್ಲಿ ನನ್ನ ಸಹೋದರ ಡಾ.ಮೋಹನ ದಾಸ್‌ ಭ್ರಷ್ಟಾಚಾರ ಮಾಡಿರುವುದನ್ನು ಸಚಿವ ಎ.ಮಂಜು ಸಾಬೀತುಪಡಿಸಬೇಕು ಎಂದು ಶಾಸಕ ಎಚ್.ಎಸ್.ಪ್ರಕಾಶ್ ನೇರ ಸವಾಲ್ ಎಸೆದಿದ್ದಾರೆ. 
 
ನಾನು ಬೆದರಿಕೆ ಒಡ್ಡಿಲ್ಲ: ಸಚಿವ ಎ.ಮಂಜು
 
ಪಶುಸಂಗೋಪನಾ ಇಲಾಖೆಯ ಎಡಿ ಆಗಿದ್ದ ಡಾ.ಮೋಹನ ದಾಸ್‌ಗೆ ನಾನು ಬೆದರಿಕೆ ಒಡ್ಡಿಲ್ಲ. ಅವರ ವಿರುದ್ಧ ದೂರು ಬಂದಿದ್ದಕ್ಕೆ ಎಚ್ಚರಿಕೆ ನೀಡಿದ್ದೆ. ತಪ್ಪು ತಿಳಿದುಕೊಂಡು ವಿಆರ್‌ಎಸ್ ಪಡೆದರೇ ನಾನು ಜವಾಬ್ದಾರನಲ್ಲ ಎಂದು ಸಚಿವ ಎ.ಮಂಜು ಸ್ಪಷ್ಟಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ವಿಶ್ವಯುದ್ಧ ಭೀತಿ: ರಷ್ಯಾದಲ್ಲಿ ತುರ್ತುಪರಿಸ್ಥಿತಿ ಹೇರಿದ ವ್ಲಾಡೀಮಿರ್ ಪುಟಿನ್