Webdunia - Bharat's app for daily news and videos

Install App

ಮೆಟ್ರೋ ಪಿಲ್ಲರ್ ಕುಸಿಯಲು ಮೆಟ್ರೋ ಎಂಡಿ ನೇರ ಹೊಣೆ

Webdunia
ಶನಿವಾರ, 14 ಜನವರಿ 2023 (14:46 IST)
ಬಿ ಎಂ ಆರ್ ಸಿಎಲ್ ಎಂಡಿ ಅಂಜುಂ ಫರ್ವೆಜ್ ರನ್ನು ಇಲ್ಲಿಂದ ಟ್ರಾನ್ಫರ್ ಮಾಡಬೇಕು.ಎಂಡಿ ಗೆ ಮೆಟ್ರೋ ಬಗ್ಗೆ ಯಾವುದೇ ಅನುಭವವಿಲ್ಲ.ಮೆಟ್ರೋ ಬಗ್ಗೆ ಜ್ಞಾನ, ಅನುಭವ, ವಿದ್ಯಾರ್ಹತೆ ಇಲ್ಲದವರನ್ನು ನೇಮಕ ಮಾಡಿಕೊಂಡಿದ್ದೆ.ನಾಗವಾರ ಮೆಟ್ರೋ ಪಿಲ್ಲರ್ ರಾಡುಗಳು ಕುಸಿಯಲು ಕಾರಣ ಎಂದು ಅಂಜುಂ ಫರ್ವೆಜ್ ಮೇಲೆ ನೇರವಾರ ಆರೋಪ‌ವನ್ನ ಸೂರ್ಯನಾರಾಯಣ ಮೂರ್ತಿ ಮಾಡಿದ್ದಾರೆ.ಇಂದು ಸಿಎಂಗೆ ಪತ್ರ ಬರೆಯುತ್ತಿನಿ ಎಂದ ಬಿಎಂಆರ್ ಸಿ ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ನನ್ನ ದೂರನ್ನು ಸರಿಯಾಗಿ ಪರಿಶೀಲನೆ ಮಾಡಿದ್ರೆ ಈ ಘಟನೆ ನಡೆಯುತ್ತಿರಲಿಲ್ಲ.ಸರಿಯಾದ ವಿದ್ಯಾರ್ಹತೆ, ಮೆಟ್ರೋ ಬಗ್ಗೆ ಅನುಭವ ಇಲ್ಲದವರನ್ನು ಎಂಡಿ ನೇಮಕ ಮಾಡಿಕೊಂಡಿದ್ದಾರೆ.
 
ಅನಧಿಕೃತವಾಗಿ ಐನೂರಕ್ಕು ಹೆಚ್ಚು ಜನರನ್ನು ಬಿಎಂಆರ್ಸಿಎಲ್ ‌ನಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದಾರೆ.65 ರಿಂದ 70 ವರ್ಷ ವಯಸ್ಸಾಗಿ ನಿವೃತ್ತಿವೊಂದಿದವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.ಇಂತಹ ಅರ್ಹತೆ ಇಲ್ಲದ ಇಂಜಿನಿಯರ್ ಗಳಿಂದ ಏನನ್ನು ಅಪೇಕ್ಷಿಸಲು ಸಾಧ್ಯ.ಮೆಟ್ರೋ ಬಗ್ಗೆ ಅಧ್ಯಾಯನ ಮಾಡಿದ ಯುವಕರಿಗೆ ಕೆಲಸ ನೀಡಿದ್ರೆ ಮೊನ್ನೆಯ ಅವಘಡ ಆಗುವುದು ತಪ್ಪುತ್ತಿತ್ತು.ನಾನು ಈಗಾಗಲೇ ರೈಲ್ವೆ ಸಚಿವರಿಗೆ, ಅರ್ಬನ್ ಡೆವಲಪ್ಮೆಂಟ್ ಡಿಪಾರ್ಟ್ಮೆಂಟ್ ಹಾಗೂ ರಾಜ್ಯದ ಸಿಎಂಗೆ ಸರಿಯಾದ ಅನುಭವ ಇಲ್ಲದವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ ಎಂದು ದೂರು ನೀಡಿದ್ದೇನೆ.ಸುಮಾರು ಐನೂರು ಜನರನ್ನು ಯಾವುದೇ ನೋಟಿಫಿಕೇಷನ್ ಮಾಡದೆ ಕೆಲಸ ತೆಗೆದುಕೊಂಡಿದ್ದಾರೆ.ಗುತ್ತಿಗೆದಾರ ಕೆಲಸ ಮಾಡುವ ವೇಳೆ ಬಿಎಂಆರ್ಸಿಎಲ್ ಅಧಿಕಾರಿಗಳು ಪರಿಶೀಲನೆ ಮಾಡುವುದು ಅವರ ಕರ್ತವ್ಯ ನಡೆದಿದೆ.ಘಟನೆ ನಡೆದು ನಾಲ್ಕು ಗಂಟೆ ಆದ ಮೇಲೆ ಎಂಡಿ ಸ್ಥಳಕ್ಕೆ ಹೋಗಿದ್ದಾರೆ .ಇದರಲ್ಲೇ ಗೊತ್ತಾಗುತ್ತದೆ ಇವರಿಗೆ ಎಷ್ಟರ ಮಟ್ಟಿಗೆ ಜನರ ಬಗ್ಗೆ ಕಾಳಜಿ ಇದೆ ಎಂದು ಬಿಎಂಆರ್ಸಿಎಲ್ ಇ‌ಂಜಿನಿಯರ್ ಗಳು ಪ್ರತಿದಿನ ಸಿವಿಲ್ ಕಾಮಗಾರಿಗಳನ್ನು ತಪಾಸಣೆ ಮಾಡಿಲ್ಲ.ಎಂಡಿ ಗೂ ಅಷ್ಟೊಂದು ಅನುಭವವಿಲ್ಲ ನಾನು ಸಿಎಂಗೆ  ಈ ಘಟನೆ ಬಗ್ಗೆ ಪತ್ರ ಬರೆಯುತ್ತೆನೆ.ನಾನು ಕೊಟ್ಟ ದೂರನ್ನು ‌ಸರಿಯಾಗಿ ಪರಿಶೀಲಿಸಿದ್ರೆ ಈ ಘಟನೆ ನಡೆಯುತ್ತಿರಲಿಲ್ಲ ಮೊದಲು ಎಂಡಿ ಅಂಜುಂ ಫರ್ವೆಜ್ ಅನ್ನು ಇಲ್ಲಿಂದ ಟ್ರಾನ್ಫರ್ ಮಾಡಬೇಕು.
 
ಮೆಟ್ರೋ ಬಗ್ಗೆ ಅನುಭವ ಇಲ್ಲದ, ವಿದ್ಯಾರ್ಹತೆ ಇಲ್ಲದೇ ನೇಮಕಗೊಂಡಿರುವವರನ್ನು ಕೆಲಸ ದಿಂದ ವಜಾ ಮಾಡಬೇಕೆಂದು ಮನವಿ ಮಾಡ್ತಿನಿ.ಮೆಟ್ರೋ ಬಗ್ಗೆ ಅನುಭವ ಇರುವ ಯುವಕರನ್ನು ಹೊಸದಾಗಿ ನೇಮಕ‌ ಮಾಡಿಕೊಳ್ಳಬೇಕು.ಸೂರ್ಯ ನಾರಾಯಣ ಮೂರ್ತಿ ಉಪಾಧ್ಯಕ್ಷ ಬಿಎಂಆರ್ಸಿಎಲ್ ಎಂಪ್ಲಾಯಿಸಿ ಅಸೋಸಿಯೇಷನ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments