ಮೆಕನ್ ಚಂಡುಮಾರುತ ಹಾವಳಿಗೆ ತತ್ತರಿಸಿದ ಉಡುಪಿ

Webdunia
ಮಂಗಳವಾರ, 29 ಮೇ 2018 (18:39 IST)
ಕಳೆದೆರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಗುಡುಗು‌ ಮಿಂಚು ಸಹಿತ ಮಳೆ ಹಲವಾರು ಅನಾಹುತಗಳನ್ನು ಸೃಷ್ಟಿ ಮಾಡಿದೆ.
ರಾತ್ರಿ ಹೊತ್ತಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಜಿಲ್ಲಾದ್ಯಾಂತ ಹಲವು ಮರಗಳು ಧರೆಗುಳಿದಿದೆ.ಕೆಲವೊಂದು‌ ಮರಗಳು ಮನೆ ಮೇಲೆ ಉರುಳಿದ್ದು ಅಪಾರ ಅಸ್ತಪಾಸ್ತಿ ನಷ್ಟ ಉಂಟಾಗಿದೆ.ರಸ್ತೆ ಬದಿಗಳಲ್ಲಿ ಇದ್ದ ಮರಗಳು ವಿದ್ಯೂತ್ ತಂತಿಗಳ ಮೇಲೆ  ಬಿದ್ದು ವಿದ್ಯೂತ್ ಕಂಬಗಳು ಮುರಿದು ಬಿದ್ದಿದ್ದು, ಮೆಸ್ಕಾಂ ಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
 
ಇದರಿಂದಾಗಿ‌ ಉಡುಪಿಯ ಹೆಚ್ಚಿನ‌ ಕಡೆಗಳಲ್ಲಿ ಎರಡು ದಿನಗಳಿಂದ ವಿದ್ಯೂತ್ ಇಲ್ಲದೇ ಕತ್ತಲ್ಲಲ್ಲಿ ಕಳೆಯುವಂತಾಗಿದೆ. ಬೃಹತ್ ಕಂಬಗಳು ಹಾಗೂ ಮರಗಳು ರಸ್ತೆಗುರುಳಿದ ಪರಿಣಾಮ ಹಲವು ಕಡೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
 
ಇನ್ನೂ ಗುಡುಗು ಸಿಡಿಲಿನ ಅಬ್ಬರ ಜೋರಾಗಿದ್ದು ಸಿಡಿಲಿನಬ್ಬರಕ್ಕೆ ಕಾರ್ಕಳದ ಬೈಲೂರಿನಲ್ಲಿ ಒಬ್ಬ ಮಹಿಳೆ ಮೃತರಾಗಿದ್ದಾರೆ.ಬೈಲೂರಿಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಶೀಲಾ ಎಂಬವರು ಸಿಡಿಲಿಗೆ ಬಲಿಯಾಗಿದ್ದು ,ಜೊತೆಯಲ್ಲಿ ಮಲಗಿದ್ದ ಪತಿ ಗಂಭೀರಾ ಗಾಯಗೊಂಡು ಕಾರ್ಕಳ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿದ್ದಾರೆ.
 
ತುರ್ತು ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಕ್ರಮಗಳನ್ನು ಕೈಗೊಂಡಿದ್ದು,ಅಗ್ನಿ ಶಾಮಕ ದಳ ಸೇರಿದಂತೆ ಎಲ್ಲಾ  ಇಲಾಖೆ ಗಳು ಮಳೆ ಪರಿಹಾರಕ್ಕೆ ಸಿದ್ದರಾಗಿರುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡಿಗರ ರಕ್ಷಣೆಗೆ ಕೇಂದ್ರದ ಜೊತೆ ಮಾತುಕತೆ: ವಿಜಯೇಂದ್ರ

ತನ್ನ ಮಗ ಗೆಲ್ಲಲಿಲ್ಲ ಎಂದು ಪ್ರಜ್ವಲ್ ಅರೆಸ್ಟ್ ಆಗುವಂತೆ ಮಾಡಿದ್ದೇ ಕುಮಾರಸ್ವಾಮಿ: ಕದಲೂರು ಉದಯ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಇಸ್ಲಾಂಗಾಗಿ, ಖಮೇನಿ ಸಾಬ್ ಗಾಗಿ ನನ್ನ ಮಕ್ಕಳನ್ನೂ ಯುದ್ಧಕ್ಕೆ ಕಳುಹಿಸುವೆ: ದೆಹಲಿ ಮಹಿಳೆ ಕಣ್ಣೀರು Video

ಮುಂದಿನ ಸುದ್ದಿ
Show comments