ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಮೇಘನಾ ಶೆಟ್ಟಿ ಮತ್ತು ಸುಮಂತ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಮೇಘನಾ ತನ್ನ ಪ್ರಿಯಕರ ಸುಮಂತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾಳೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಸ್ ನಿಲ್ದಾಣದ ಬಳಿ ನಡೆದ ಘಟನೆ ನಡೆದಿದ್ದು, ಮೇಘನಾ ಚಾಕುವಿನಿಂದ ತನ್ನ ಪ್ರಿಯಕರ ಸುಮಂತನ ಕತ್ತು ಕತ್ತರಿಸಲು ಯತ್ನಿಸಿದ್ದಾಳೆ. ಆದರೆ, ಅಕಸ್ಮಿಕ ದಾಳಿಯಿಂದ ತಬ್ಬಿಬ್ಬಾದ ಸುಮಂತ ತಲೆ ತಗ್ಗಿಸಿದ್ದರಿಂದ ಮುಖಕ್ಕೆ ಚಾಕು ಚುಚ್ಚಿ ರಕ್ತಸ್ರಾವವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಪ್ರಿಯಕರ ಸುಮಂತನಿಗೆ ಚಾಕು ಇರಿದು ನಂತರ ಅಟೋದಲ್ಲಿ ಮೇಘನಾ ಪರಾರಿಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾದ ಮೇಘನಾ ಶೆಟ್ಟಿ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.