Select Your Language

Notifications

webdunia
webdunia
webdunia
webdunia

ಬಿಎಸ್ ವೈ ಸಮರ್ಥಿಸಿ ಎಂಬಿ ಪಾಟೀಲ್ ಟ್ವಿಟ್​

ಬಿಎಸ್ ವೈ ಸಮರ್ಥಿಸಿ ಎಂಬಿ ಪಾಟೀಲ್ ಟ್ವಿಟ್​
bengaluru , ಸೋಮವಾರ, 19 ಜುಲೈ 2021 (19:12 IST)
ಮಾಜಿ ಸಚಿವ ಎಂಬಿ ಪಾಟೀಲ್ ರು ಬರೆದುಕೊಂಡ  ಟ್ವೀಟ್ ಈಗ ರಾಜಕಾರಣದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಆದರೆ ತಮ್ಮ ಟ್ವಿಟ್​ ಅನ್ನು ಅವರು ಸಮರ್ಥಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. 
ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಎಂಬಿ ಪಾಟೀಲ್
, ನಾನು ನನ್ನ ಟ್ವೀಟ್ ಗೆ ಬದ್ಧನಾಗಿದ್ದೇನೆ. ಯಡಿಯೂರಪ್ಪರನ್ನ  ಪಕ್ಷದವರೆಲ್ಲ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕೊಡುಗೆ ಅಪಾರ ಅದನ್ನು ಯಾರೂ ಮರೆಯುವಂತಿಲ್ಲ ಎಂದರು. 
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕಾರಣ. ಆದ್ದರಿಂದ  ಸಿಎಂ ನಾಯಕತ್ವ ಮುಂದುವರೆಸುವುದು ಬದಲಾವಣೆ ಮಾಡುವುದು ಅವರ ಪಕ್ಷಕ್ಕೆ ಬಿಟ್ಟಿದ್ದು. ಈ ಸಿಎಂ ಹಿಂದೆ ದೆಹಲಿಗೆ ಹೋದಾಗ ದೆಹಲಿ ಮಾಧ್ಯಮಗಳಲ್ಲಿ ಸುದ್ದಿ ಮಾಡಿಸಿ ಅವರನ್ನ ವೀಕ್ ಮಾಡಿದ್ದರು. ನಿನ್ನೆ ಆಡಿಯೋ ಬಿಡುಗಡೆ ಮಾಡಿ ಅವರನ್ನ ಮತ್ತಷ್ಟು ವೀಕ್ ಮಾಡಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.
ಯಡಿಯೂರಪ್ಪ ನಮ್ಮ ಸಮುದಾಯದ ನಾಯಕ ನನಗೆ ನೋವಾಗಿದೆ.ಜನತೆಗೂ ಸಹ ನೋವಾಗಿದೆ. ಅವರ ಪರವಾಗಿ ಹೇಳಿಕೆ ಕೊಟ್ಟು ರಾಜಕೀಯ ಲಾಭ ಪಡೆಯುವ ಉದ್ದೇಶ ನನ್ನದಲ್ಲ ಇದು ನನ್ನ ನಿಲುವು ನನ್ನ ಪಕ್ಷದ ನಿಲುವಲ್ಲ. ಪಕ್ಷದ ವರಿಷ್ಠರು ನಡೆದುಕೊಳ್ಳುತ್ತಿರುವ ರೀತಿಗೆ ಅಸಮಾಧಾನ ಇದೆ ಎಂದು ಎಂಬಿ ಪಾಟೀಲರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ಹ್ಯಾಂಡ್ ಸೆಟ್ ಪದೇಪದೆ ಬದಲಿಸಿದರೂ ಹ್ಯಾಕ್ ಮಾಡ್ತಿದ್ದಾರೆ: ಪ್ರಶಾಂತ್ ಕಿಶೋರ್