Webdunia - Bharat's app for daily news and videos

Install App

ಮಾತಾ ಮಾಣಿಕೇಶ್ವರಿ ಮಾತೆಯ ದರ್ಶನ ಪಡೆದ ಭಕ್ತರು

Webdunia
ಶುಕ್ರವಾರ, 9 ನವೆಂಬರ್ 2018 (18:34 IST)
ಯಾನಗುಂದಿಯ ಶ್ರೀಮಾತಾ ಮಾಣಿಕೇಶ್ವರಿ ಮಾತೆ  ಪಟ್ಟಣದಲ್ಲಿ ಭಕ್ತಾಧಿಗಳಿಗೆ ಧರ್ಮದರ್ಶನ ನೀಡಿದರು.

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಯಾನಗುಂದಿಯ ಶ್ರೀಮಾತಾ ಮಾಣಿಕೇಶ್ವರಿ ಮಾತೆ  ಗುರುಮಠಕಲ್ ಪಟ್ಟಣದಲ್ಲಿ ಭಕ್ತಾಧಿಗಳಿಗೆ ಧರ್ಮದರ್ಶನ ನೀಡಿದರು. ಮಾತಾಮಾಣಿಕೇಶ್ವರಿ ಮಾತಾ ಇದುವರೆಗೂ ಹೊರಗಡೆ ಬಂದು ಭಕ್ತರಿಗೆ ದರ್ಶನ ನೀಡಿದ್ದೇ ಎರಡನೇ ಬಾರಿ. ಒಮ್ಮೆ ಮಾತೆಯ ಸಹೋದರಿ ಲಿಂಗೈಕ್ಯರಾದಾಗ ಬಿಟ್ರೆ ಅವರು ತಮ್ಮ ಆಶ್ರಮದಿಂದ ಹೊರಗಡೆಗೆ ಬಂದಿದ್ದು ಇವತ್ತೇ ಅಂತೇ.

ಆದ್ದರಿಂದ ಯಾನಗುಂದಿ, ಗುರುಮಿಠಕಲ್ ಸುತ್ತಮುತ್ತಲಿನ ಭಕ್ತಾಧಿಗಳು ಮಾತೆಯ ದರ್ಶನ ಪಡೆದು ಖುಷಿಪಟ್ರು. ಮಾತಾ ಮಾಣಿಕೇಶ್ವರಿ ಮಾತೆಯ ಬಹುದಿನಗಳ ಕನಸು ಮಹಾರಾಷ್ಟ್ರದ ಪೆದ್ದಾ ಶಹಾಪೂರದಲ್ಲಿ ಅನಾಥ ಆಶ್ರಮ ಉದ್ಘಾಟನೆಯ ನಿಮಿತ್ಯ ಯಾನಗುಂದಿಯಿಂದ ಗುರುಮಠಕಲ್ ಗುಜುನೂರ್ ಮಾರ್ಗದ ಕಂಕಲ್, ಅನುಪುರ, ನಾರಾಯಣಪೇಟೆ, ಮಹಾರಾಷ್ಟ್ರದ ಮಾಹಿಬೂಬ್ಬ ನಗರ, ಜಾರ್ಚಲ, ಮಾರ್ಗದ ಮೂಲಕ ಹೈದರಾಬಾದ್ ನ ಪೆದ್ದ ಶಹಾಪೂರಕ್ಕೆ ಪ್ರಯಾಣ ಬೆಳೆಸಿದರು.

ದಾರಿಯುದ್ದಕ್ಕೊ ಮಾತಾಜೀ ತಲುಪುವ ಸ್ಥಳದವರೆಗೆ ಪೋಲಿಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಆಯಾ ಊರುಗಳಲ್ಲಿ ರಸ್ತೆ ಉದ್ದಕ್ಕೂ ನೀರು ಹಾಕಿ, ಮದುವಣಗಿತ್ತಿಯಂತೆ ಸಿಂಗರಸಿ ಪುಷ್ಪವೃಷ್ಟಿಯೊಂದಿಗೆ ಮಾತಾಜಿಗೆ ಸ್ವಾಗತ ನೀಡಲಾಯಿತು.  

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments