Select Your Language

Notifications

webdunia
webdunia
webdunia
webdunia

ಸಂಸದೆ ಸುಮಲತಾಗೆ ಭಾರೀ ಅವಮಾನ: ಕಾಂಗ್ರೆಸ್ ಮುಖಂಡರಿಂದ ಕಚೇರಿಗೆ ಮುತ್ತಿಗೆ

ಸಂಸದೆ ಸುಮಲತಾಗೆ ಭಾರೀ ಅವಮಾನ: ಕಾಂಗ್ರೆಸ್ ಮುಖಂಡರಿಂದ ಕಚೇರಿಗೆ ಮುತ್ತಿಗೆ
ಮಂಡ್ಯ , ಗುರುವಾರ, 27 ಜೂನ್ 2019 (19:39 IST)
ಮಂಡ್ಯ ಜಿಲ್ಲೆಯ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಅವಮಾನ ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಹಸೀಲ್ದಾರ್ ಶಿವಮೂರ್ತಿ ವಿರುದ್ಧ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಡಪ್ರಭು ಕೆಂಪೇಗೌಡರ ಜಯಂತಿಯ ಕಾರ್ಯಕ್ರಮಕ್ಕೆ ಸಂಸದೆ ಸುಮಲತಾ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಕೈ ಬಿಟ್ಟು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಸಂಸದರಿಗೆ ತಹಶಿಲ್ದಾರ್ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ತಹಸೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿದ್ದಾರೆ.

ತಹಸೀಲ್ದಾರ್ ಗೆ ಬೆವರು ಇಳಿಸಿದ್ದಾರೆ ಕಾಂಗ್ರೆಸ್ ಮುಖಂಡರು. ಅಧಿಕಾರದ ಮದದಿಂದ ತಹಸೀಲ್ದಾರ್ ವರ್ತಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ ಪ್ರತಿಭಟನಾಕಾರರು.

ತಹಸೀಲ್ದಾರ್ ವರ್ಗಾವಣೆಗೆ ಒತ್ತಾಯವನ್ನೂ ಮಾಡಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮಕ್ಕೆ ಡಿಸಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಪ್ರತಿಭಟನೆಗೆ ಹೆದರಿದ ತಹಸೀಲ್ದಾರ್, ಮುಖಂಡರಲ್ಲಿ ಕ್ಷಮೆಯಾಚಿಸಿದ್ದಾರೆ. ಪುರಸಭೆ ಸದಸ್ಯರಾದ ಕೆ.ಬಿ.ಮಹೇಶ್, ರವೀಂದ್ರ ಬಾಬು, ಪ್ರೇಮ ಕುಮಾರ್, ಕೆ.ಸಿ.ಮಂಜುನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಹಾವು ಕಚ್ಚಿ ಸಾಯುತ್ತಿದ್ರೂ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡೋರಿಲ್ಲ!